ಪೆಟ್ರೋಲ್-ಡೀಸೆಲ್ ಕೊರತೆ ಇಲ್ಲ – ವದಂತಿ ಹರಡಿಸಿದ್ರೆ ಕೇಸ್ ಫಿಕ್ಸ್!.
ಧಾರವಾಡದಲ್ಲಿ ಇಂಧನ ಸಾಕಷ್ಟಿದೆ – ಸುಳ್ಳು ಸುದ್ದಿ ಹಬ್ಬಿಸಿದವರಿಗೆ ಕಠಿಣ ಎಚ್ಚರಿಕೆ!
ವದಂತಿಗೆ ಬ್ರೇಕ್: ಜಿಲ್ಲಾಧಿಕಾರಿಯಿಂದ ಕ್ಲಿಯರ್ ಮೆಸೇಜ್!
ಅಪಪ್ರಚಾರ ಮಾಡಿದ್ರೆ ಬಿಡೋದಿಲ್ಲ – ಆಡಳಿತದ ಖಡಕ್ ವಾರ್ನಿಂಗ್!
ಧಾರವಾಡ ಜಿಲ್ಲೆಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಕೊರತೆ ಇದೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಜನರಲ್ಲಿ ಅನಗತ್ಯ ಆತಂಕ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಸ್ಪಷ್ಟನೆ ನೀಡಿ, ಜಿಲ್ಲೆಯಲ್ಲಿ ಯಾವುದೇ ರೀತಿಯ ಇಂಧನ ಕೊರತೆ ಇಲ್ಲ ಎಂದು ತಿಳಿಸಿದ್ದಾರೆ…
ಜನರು ವದಂತಿಗಳನ್ನು ನಂಬದೆ, ಶಾಂತವಾಗಿರಬೇಕು ಎಂದು ಮನವಿ ಮಾಡಿರುವ ಅವರು, ಪೆಟ್ರೋಲ್ ಬಂಕ್ಗಳಲ್ಲಿ ಇಂಧನ ಸರಬರಾಜು ಸಮರ್ಪಕವಾಗಿದೆ ಎಂದು ಹೇಳಿದ್ದಾರೆ…
ಇದೇ ವೇಳೆ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಸಾರ್ವಜನಿಕರು ಜವಾಬ್ದಾರಿಯುತವಾಗಿ ವರ್ತಿಸಿ, ಅಪಪ್ರಚಾರಗಳಿಗೆ ಅವಕಾಶ ಕೊಡಬಾರದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

