ಮಧ್ಯಪ್ರದೇಶದ ಜಬಲ್ಪುರ್ ದೋಣಿ ದುರಂತದಲ್ಲಿ ಸಾವಿಗೀಡಾದವರ ಸಂಖ್ಯೆ 13ಕ್ಕೆ ಏರಿದೆ. 5 ವರ್ಷದ ಬಾಲಕ ಮತ್ತು ಆತನ ದೊಡ್ಡಪ್ಪನ ಮೃತದೇಹ ಭಾನುವಾರ ಪತ್ತೆಯಾಗಿದೆ. ಈ ಮೂಲಕ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. ಮೃತರನ್ನು ಮಯೂರಂ (5) ಹಾಗೂ ಕಾಮರಾಜ್ (50) ಎಂದು ಗುರುತಿಸಲಾಗಿದೆ. ಬಾರ್ಗಿ ಜಲಾಶಯದ ನದಿ ಪಾತ್ರದಲ್ಲಿ ಮೃತದೇಹಗಳು ತೇಲುತ್ತಿದ್ದನ್ನು ಗಮನಿಸಿ ಹೊರತೆಗೆದು, ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಉಪ ವಿಭಾಗಾಧಿಕಾರಿ ತಿಳಿಸಿದ್ದಾರೆ. ಇದರೊಂದಿಗೆ ದುರಂತದಲ್ಲಿ ನಾಪತ್ತೆಯಾಗಿದ್ದ 13 ಮಂದಿಯ ಮೃತದೇಹವೂ ಪತ್ತೆಯಾಗಿದೆ. ದುರಂತಕ್ಕೀಡಾದ ದೋಣಿಯಲ್ಲಿ 41 ಮಂದಿ ಪ್ರಯಾಣಿಕರಿದ್ದರು. ಈ ಪೈಕಿ 28 ಮಂದಿಯನ್ನು ರಕ್ಷಿಸಲಾಗಿದೆ ಎಂದೂ ತಿಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

