ಪಣಂಬೂರು: ಫಾತಿಮಾ ಬೀಚ್ ಬಳಿ ಗಾಂಜಾ ಸೇವಿಸಿ ನಶೆಯಲ್ಲಿದ್ದ ಯುವಕನನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ತಣ್ಣೀರುಬಾವಿಯಲ್ಲಿ ಸಂಭವಿಸಿದೆ. ಹೇಮಂತ್ (20) ಬಂಧಿತ ಯುವಕ. ಮಂಗಳೂರು ಠಾಣಾ ವ್ಯಾಪ್ತಿಯಲ್ಲಿ ಗಸ್ತು ಕರ್ತವ್ಯದಲ್ಲಿದ್ದ ಎಚ್ಸಿ ಇಮ್ತಿಯಾಜ್ ಮತ್ತು ಪಿಸಿ ರಾಕೇಶ್ ಅವರು ಫಾತಿಮಾ ಬೀಚ್ ಬಳಿ ಅನುಮಾನಾಸ್ಪದವಾಗಿ ಕಂಡುಬಂದ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು.ಆತ ಮಾತನಾಡಲು ತಡವರಿಸುತ್ತಿದ್ದ ಕಾರಣ ಕೂಲಂಕುಷವಾಗಿ ವಿಚಾರಿಸಿದಾಗ ಗಾಂಜಾ ಸೇವಿಸಿರುವುದಾಗಿ ಒಪ್ಪಿಕೊಂಡಿದ್ದಾನೆ. ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

