ಹರಿಹರ: ತಾಲ್ಲೂಕಿನ ಚಿಕ್ಕಬಿದರೆ ಗ್ರಾಮದಲ್ಲಿ ದುಷ್ಕರ್ಮಿಗಳು ಕಲ್ಲಿನಿಂದ ಜಜ್ಜಿ ಗ್ರಾಮದ ಶಿವಪ್ಪ (44) ಎಂಬಾತನನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಶಿವಪ್ಪ ಹೆಂಡತಿ ಮತ್ತು ಮಗನೊಂದಿಗೆ ಚಿಕ್ಕಬಿದರೆ ಕ್ಯಾಂಪ್ನಲ್ಲಿ ವಾಸವಿದ್ದರು. ನರೇಗಾ ಕೆಲಸಕ್ಕೆ ಹೋಗುತ್ತಿದ್ದ ಪತ್ನಿ ಸಾವಿತ್ರಮ್ಮ ಬೆಳಿಗ್ಗೆ 11.30ಕ್ಕೆ ವಾಪಸ್ ಬಂದಾಗ ಗಂಡ ಮನೆಯಲ್ಲಿರಲಿಲ್ಲ.ರಾತ್ರಿ 10ರವರೆಗೂ ಕಾದು, ಆತ ಬಾರದಿದ್ದಾಗ ಪತ್ನಿ ಹಾಗೂ ಮಗ ಊಟ ಮಾಡಿ ಮಲಗಿದ್ದರು. ಜೂನ್ 23ರ ಮುಂಜಾನೆ 4.30ರ ಸುಮಾರಿಗೆ ಎಂದಿನಂತೆ ಶಿವಮ್ಮ ಎದ್ದು, ಮನೆಯ ಹಿಂದಿನ ಬಾಗಿಲು ತೆರೆದು ನೋಡಿದಾಗ ಕಾಂಪೌಂಡ್ನ ಸಿಮೆಂಟ್ ಚಡಿಯ ಮೇಲೆ ಶಿವಪ್ಪ ಮಕಾಡೆಯಾಗಿ ಬಿದ್ದಿದ್ದು, ತಲೆಗೆ ತೀವ್ರ ಪೆಟ್ಟಾಗಿ, ಕಿವಿ ಹಾಗೂ ಮೂಗಿನಲ್ಲಿ ರಕ್ತಸ್ರಾವವಾಗಿ ಮೃತಪಟ್ಟಿರುವುದು ಗೊತ್ತಾಗಿದೆ. ದುಷ್ಕರ್ಮಿಗಳು ಮಾರಕಾಸ್ತ್ರ ಅಥವಾ ಕಲ್ಲಿನಿಂದ ಹೊಡೆದು ಶಿವಪ್ಪನನ್ನು ಕೊಲೆ ಮಾಡಿದ್ದಾರೆ ಎಂದು ಮೃತನ ಅಣ್ಣ ಬಸಪ್ಪ ಪೊಲೀಸರಿಗೆ ನೀಡಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

