ಬೆಂಗಳೂರು: ₹20 ವಿದ್ಯುತ್ ಬಿಲ್ ಪಾವತಿಸಲು ಮುಂದಾದ 71 ವರ್ಷದ ವ್ಯಕ್ತಿಯೊಬ್ಬರು ಸೈಬರ್ ವಂಚಕರ ಬಲೆಗೆ ಬಿದ್ದು ₹1.99 ಲಕ್ಷ ಕಳೆದುಕೊಂಡ ಘಟನೆ ನಡೆದಿದೆ. ವಿದ್ಯುತ್ ಸಂಪರ್ಕ ಕಡಿತಗೊಳ್ಳಲಿದೆ ಎಂಬ ಸಂದೇಶ ನಂಬಿ ನಕಲಿ ಆಯಪ್ ಡೌನ್ಲೋಡ್ ಮಾಡಿದ ಬಳಿಕ ಅವರ ಎಸ್ಬಿಐ ಖಾತೆಯಿಂದ ಅನಧಿಕೃತ ವಹಿವಾಟು ನಡೆದಿದೆ. ವಂಚನೆ ಗೊತ್ತಾದ ತಕ್ಷಣ ಬ್ಯಾಂಕ್ ಹಾಗೂ ಪೊಲೀಸರಿಗೆ ದೂರು ನೀಡಿದ್ದರೂ, ಎಸ್ಬಿಐ ₹1.99 ಲಕ್ಷ ಮರುಪಾವತಿಸಲು ನಿರಾಕರಿಸಿತ್ತು. ಗ್ರಾಹಕ ಆಯೋಗಗಳು ಬ್ಯಾಂಕ್ನ ವಾದ ತಿರಸ್ಕರಿಸಿ, ಗ್ರಾಹಕರ ನಿರ್ಲಕ್ಷ್ಯ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿವೆ. NCDRC ಕೂಡ ಎಸ್ಬಿಐ ಮೇಲ್ಮನವಿ ತಿರಸ್ಕರಿಸಿ, ₹1.99 ಲಕ್ಷ ಮರುಪಾವತಿಸುವಂತೆ ಹಾಗೂ ₹25 ಸಾವಿರ ಪರಿಹಾರ ನೀಡುವಂತೆ ಆದೇಶಿಸಿದೆ. ವಿದ್ಯುತ್ ಬಿಲ್ ಸೇರಿದಂತೆ ಯಾವುದೇ ಸೇವೆಯ ಹೆಸರಿನಲ್ಲಿ ಬರುವ ಅಪರಿಚಿತ ಲಿಂಕ್ಗಳು, ಮೊಬೈಲ್ ಸಂಖ್ಯೆಗಳು ಅಥವಾ ಆಯಪ್ಗಳನ್ನು ಪರಿಶೀಲಿಸದೆ ಬಳಸಬಾರದು ಎಂದು ಎಚ್ಚರಿಕೆ ನೀಡಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

