ಡಿಎಂಕೆ ನಾಯಕ ಮತ್ತು ಪುದುಚೇರಿ ಮಾಜಿ ಮುಖ್ಯಮಂತ್ರಿ ಆರ್.ವಿ.ಜನಕೀರಾಮನ್(೭೯) ಸೋಮವಾರ ಪುದುಚೇರಿಯಲ್ಲಿ ನಿಧನರಾದರು. ಅವರ ಆರೋಗ್ಯ ಸ್ಥಿತಿ ಕ್ಷೀಣಿಸಿದ ಬಳಿಕ ಜನಕಿರಾಮನನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಸಂಸತ್ ಸದಸ್ಯರು ಸೇರಿದಂತೆ ಹಿರಿಯ ಪಕ್ಷದ ಮುಖಂಡರು ಅವರನ್ನು ನೋಡಲು ಆಸ್ಪತ್ರೆಯಲ್ಲಿ ಭೇಟಿ ನೀಡಿದ್ದರು.ಡಿಎಂಕೆ ಮುಖ್ಯಸ್ಥ ಎಂ.ಕರುಣಾನಿಧಿಗೆ ಚಾಲಕನಾಗಿದ್ದ ಜನಕೀರಾಮನ್ ನೆಲ್ಲಿಥೋಪ್ ವಿಧಾನಸಭೆ ಕ್ಷೇತ್ರದಿಂದ ಆಯ್ಕೆಯಾದರು. ಅವರು ಮೇ 26, 1996 ರಿಂದ ಪಾಂಡಿಚೆರಿಯ ಮುಖ್ಯಮಂತ್ರಿಯಾಗಿ ಮಾರ್ಚ್ 18, 2000 ರವರೆಗೆ ಸೇವೆ ಸಲ್ಲಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





