ಫ್ಲೋರಿಡಾ (ಅಮೆರಿಕ): ವೆಸ್ಟ್ ಇಂಡೀಸ್ನ ದಿಗ್ಗಜ ಆಟದ ಮುಂದೆ ಭಾರತ ಐಪಿಎಲ್ ಸ್ಟಾರ್ಗಳ ಆಟ ನಡೆಯಲಿಲ್ಲ. 3 ಮತ್ತು 4 ನೇ ಪಂದ್ಯದಲ್ಲಿ ಕಮ್ಬ್ಯಾಕ್ ಮಾಡಿ ಸರಣಿ ಸಮಬಲ ಸಾಧಿಸಿದ್ದ ಭಾರತ ಐದನೇ ಪಂದ್ಯವನ್ನು ಎಂಟು ವಿಕೆಟ್ಗಳಿಂದ ಸೋತು ತವರಿಗೆ ಮರಳ ಬೇಕಾಗಿದೆ. ಈ ಮೂಲಕ 12ನೇ ಟಿ20 ಸರಣಿ ಜಯ ಟೀಮ್ ಇಂಡಿಯಾದ ಕೈತಪ್ಪಿದೆ. ಸಿರೀಸ್ ಸೋಲಿನ ನಂತರ ಕೋಚ್ ರಾಹುಲ್ ದ್ರಾವಿಡ್ ಆಳವಾದ ಬ್ಯಾಟಿಂಗ್ ಇಲ್ಲದಿರುವುದು ಸೋಲಿಗೆ ಕಾರಣ ಎಂದಿದ್ದಾರೆ.
ಭಾರತ ಕೇವಲ ಏಳು ವಿಕೆಟ್ವರೆಗೆ ಬ್ಯಾಟಿಂಗ್ ಬಲವನ್ನು ಹೊಂದಿದೆ. ಅಕ್ಷರ್ ಪಟೇಲ್ ನಂತರ ಯಾವುದೇ ಆಟಗಾರ ಬ್ಯಾಟಿಂಗ್ನಲ್ಲಿ ಉತ್ತಮ ಪ್ರದರ್ಶನ ನೀಡಲಾರ. ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್ ಮತ್ತು ಚಹಾಲ್ರಿಂದ ರನ್ ಗಳಿಸುವ ಭರವಸೆ ಇಡಲಾಗುವುದಿಲ್ಲ. ಹೀಗಾಗಿ ಕೊನೆಯ ಎರಡು ಓವರ್ ವೇಳೆಗೆ ಭಾರತ ಏಳು ವಿಕೆಟ್ ಕಳೆದುಕೊಂಡಲ್ಲಿ ಡೆತ್ ಓವರ್ನಲ್ಲಿ ರನ್ ಗಳಿಕೆ ಕಷ್ಟವಾಗುತ್ತದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





