Breaking News

ಅಳವಾದ ಬ್ಯಾಟಿಂಗ್ ಇಲ್ಲದ ಕಾರಣ ಪಂದ್ಯ ಸೋಲು : ದ್ರಾವಿಡ್.

ಫ್ಲೋರಿಡಾ (ಅಮೆರಿಕ): ವೆಸ್ಟ್​ ಇಂಡೀಸ್​ನ ದಿಗ್ಗಜ ಆಟದ ಮುಂದೆ ಭಾರತ ಐಪಿಎಲ್ ಸ್ಟಾರ್​ಗಳ ಆಟ ನಡೆಯಲಿಲ್ಲ. 3 ಮತ್ತು 4 ನೇ ಪಂದ್ಯದಲ್ಲಿ ಕಮ್​ಬ್ಯಾಕ್​ ಮಾಡಿ ಸರಣಿ ಸಮಬಲ ಸಾಧಿಸಿದ್ದ ಭಾರತ ಐದನೇ ಪಂದ್ಯವನ್ನು ಎಂಟು ವಿಕೆಟ್​ಗಳಿಂದ ಸೋತು ತವರಿಗೆ ಮರಳ ಬೇಕಾಗಿದೆ. ಈ ಮೂಲಕ 12ನೇ ಟಿ20 ಸರಣಿ ಜಯ ಟೀಮ್​ ಇಂಡಿಯಾದ ಕೈತಪ್ಪಿದೆ. ಸಿರೀಸ್​ ಸೋಲಿನ ನಂತರ ಕೋಚ್​ ರಾಹುಲ್​ ದ್ರಾವಿಡ್​ ಆಳವಾದ ಬ್ಯಾಟಿಂಗ್​ ಇಲ್ಲದಿರುವುದು ಸೋಲಿಗೆ ಕಾರಣ ಎಂದಿದ್ದಾರೆ.

ಭಾರತ ಕೇವಲ ಏಳು ವಿಕೆಟ್​ವರೆಗೆ ಬ್ಯಾಟಿಂಗ್​ ಬಲವನ್ನು ಹೊಂದಿದೆ. ಅಕ್ಷರ್​ ಪಟೇಲ್​ ನಂತರ ಯಾವುದೇ ಆಟಗಾರ ಬ್ಯಾಟಿಂಗ್​ನಲ್ಲಿ ಉತ್ತಮ ಪ್ರದರ್ಶನ ನೀಡಲಾರ. ಕುಲದೀಪ್​ ಯಾದವ್​, ಅರ್ಷದೀಪ್​ ಸಿಂಗ್​ ಮತ್ತು ಚಹಾಲ್​ರಿಂದ ರನ್​ ಗಳಿಸುವ ಭರವಸೆ ಇಡಲಾಗುವುದಿಲ್ಲ. ಹೀಗಾಗಿ ಕೊನೆಯ ಎರಡು ಓವರ್​ ವೇಳೆಗೆ ಭಾರತ ಏಳು ವಿಕೆಟ್​ ಕಳೆದುಕೊಂಡಲ್ಲಿ ಡೆತ್​ ಓವರ್​ನಲ್ಲಿ ರನ್​ ಗಳಿಕೆ ಕಷ್ಟವಾಗುತ್ತದೆ.

Share News

About BigTv News

Check Also

ಐಪಿಎಲ್ ಮ್ಯಾಚ್ ಮೇಲೆ ಆಹಾರ ಇಲಾಖೆ ಹದ್ದಿನ ಕಣ್ಣು ಕ್ಯಾಂಟೀನ್ ಗೆ ಕಟ್ಟುನಿಟ್ಟೀನ ಸೂಚನೆ.

ಕಳೆದ ಐಪಿಎಲ್ ಸೀಸನ್ ನಲ್ಲಿ ಆರ್‌ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ ನಡುವಿನ ಪಂದ್ಯದ ವೇಳೆ 23 ವರ್ಷದ ಯುವಕ ಚೈತನ್ಯ …

Leave a Reply

Your email address will not be published. Required fields are marked *