ಪುರಾಣ ಪ್ರಸಿದ್ಧ ಧಾರ್ಮಿಕ ಕೇಂದ್ರವಾದ ಮಲೆನಾಡಿನ ಪ್ರಕೃತಿಯ ಸೊಬಗಿನ ಸುಬ್ರಹ್ಮಣ್ಯಕ್ಕೆ ಶಾಸಕ ನಾರಾಯಣಗೌಡರ ಮನವಿಯ ಮೇರೆಗೆ ಕೆ.ಆರ್.ಪೇಟೆ ಬಸ್ ಡಿಫೋದಿಂದ ಬಸ್ ಸಂಚಾರವನ್ನು ಆರಂಭಿಸಲಾಗಿದ್ದು ಸಾರ್ವಜನಿಕರು ಹಾಗೂ ಭಕ್ತಾಧಿಗಳು ತೀವ್ರ ಸಂತೋಷ ವ್ಯಕ್ತಪಡಿಸಿದ್ದಾರೆ. ಕೆ.ಆರ್.ಪೇಟೆ ಬಸ್ ನಿಲ್ದಾಣದಿಂದ ಹೊರಡುವ ಈ ಬಸ್ಸು ಸಾಲಿಗ್ರಾಮ, ರಾಮನಾಥಪುರ, ಕೊಣನೂರು, ಸೋಮವಾರಪೇಟೆ, ಶನಿವಾರಸಂತೆ, ಬಿಸ್ಲೆ ಘಾಟಿ ಮಾರ್ಗವಾಗಿ ಸುಬ್ರಮಣ್ಯ ತಲುಪಲಿದೆ. ಡಿಫೋ ವ್ಯವಸ್ಥಾಪಕ ಶಿವಕುಮಾರ್ ಯಾತ್ರಾರ್ಥಿಗಳು ಹಾಗೂ ಸಾರ್ವಜನಿಕರು ಈ ಬಸ್ಸಿನ ಸೌಲಭ್ಯವನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





