ಚಿಕ್ಕೋಡಿ : ಶಾಸಕರು ರಾಜಿನಾಮೆ ಕೊಟ್ಟ ತಕ್ಷಣ ಸರಕಾರ ಬೀಳುವದಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜೀನಾಮೆ ಕುರಿತು ಸ್ಪೀಕರ್ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಅದಕ್ಕೂ ಮೊದಲು ಅಧಿವೇಶನ ಪ್ರಾರಂಭವಾಗಲಿದೆ, ಅಧಿವೇಶನದಲ್ಲಿ ಅಂತಿಮ ತೀರ್ಮಾನವಾಗುತ್ತದೆ ಎಂದರು.೨೫ ಜನ ಶಾಸಕರು ರಾಜೀನಾಮೆ ವಿಚಾರ ಸುಳ್ಳು .ರಾಜೀನಾಮೆ ಕೊಟ್ಟವರ ಮನವೊಲಿಸುವ ಪ್ರಯತ್ನ ನಡೆಯುತ್ತಿದೆ, ಪರಿಹಾರ ಮಾಡುವುದಕ್ಕೆ ವರಿಷ್ಠರಿದ್ದಾರೆ, ರಾಜೀನಾಮೆ ಕೊಟ್ಟವರೇ ಪಕ್ಷಕ್ಕೆ ವಾಪಸ ಬರುತ್ತಾರೆ ಎಂದು ವಿಶ್ವಾಸ ವ್ಯಕ್ತ ಪಡೆಸಿದರು .ಜಿಲ್ಲೆಯಲ್ಲಿ ಇಬ್ಬರ ಶಾಸಕರು ಮಾತ್ರ ರಾಜೀನಾಮೆ ನೀಡುತ್ತಾರೆ ಎಂದು ಮೊದಲೆ ಹೇಳಿದ್ದೆ ಇನ್ನು ಯಾರು ರಾಜೀನಾಮೆ ನೀಡಲ್ಲ. ರಿವರ್ಸ್ ಆಪರೇಶನ್ ಮಾಡಲ್ಲ. ಅದರ ಅವಶ್ಯಕತೆಯೂ ನಮಗಿಲ್ಲ ಎಂದು ತಿಳಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





