Breaking News

ಸರಗಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾದ ಖಡೇಬಜಾರ ಉಪ-ವಿಭಾಗದ ಪೊಲೀಸರು

ಬೆಳಗಾವಿ: ಖಡೇಬಜಾರ ಉಪ-ವಿಭಾಗದ ಪೊಲೀಸರು ನಾಲ್ವರು ಸರಗಳ್ಳರನ್ನು ಬಂಧಿಸಿ, ಒಟ್ಟು 9 ಪ್ರಕರಣಗಳನ್ನು ಬಯಲಿಗೆಳೆದಿದ್ದಾರೆ. 3 ಬೈಕ್ ಸಮೇತ ಸುಮಾರು 8.98 ಲಕ್ಷ ರೂ. ಮೌಲ್ಯದ ಬಂಗಾರದ ಆಭರಣಗಳನ್ನು ಜಪ್ತಿ ಮಾಡಿದ್ದಾರೆ.ಕಳೆದ ಮೇ 11 ರಂದು ಬೆಳಗಾವಿ ನಗರದ ದೇಶಪಾಂಡೆ ಚಾಳದ ವಿಮಲಾ ಸೀತಾರಾಮ ಶಿಂಧೆ ಚಿತ್ರಾ ಟಾಕೀಜ ಸಂತೋಷ-ನಿರ್ಮಲ ಟಾಕೀಜ ಬೋಳನಲ್ಲಿ ಹೊರಟಾಗ ಬೈಕ್‌ಗಳ ಮೇಲೆ ಸರಗಳ್ಳರು ಬಂದು ಒಂದು ಬೈಕ್‌ನವರು ಅಜ್ಜಿ ಅಜ್ಜಿ ಎಂದು ಕರೆದಂತೆ ಮಾಡಿ ತಿರುಗಿ ಆ ಕಡೆಗೆ ನೋಡುವಷ್ಟರಲ್ಲಿ ಇನ್ನೊಂದು ಬೈಕ್ ಮೇಲಿದ್ದ ಸರಗಳ್ಳರು ಅವರ ಕೊರಳಲ್ಲಿದ್ದ ಸುಮಾರು 32 ಸಾವಿರ ರೂ. ಮೌಲ್ಯದ 12 ಗ್ರಾಂ ತೂಕದ ಹಾರವನ್ನು ಕಿತ್ತುಕೊಂಡು ಹೋಗಿದ್ದರು.ಈ ಬಗ್ಗೆ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ ಖಡೇಬಜಾರ ಠಾಣೆಯ ಪೊಲೀಸರು ಆರೋಪಿತರ ಜಾಡು ಹಿಡಿದು ಮಾಹಿತಿ ಕಲೆ ಹಾಕಿ ಖಚಿತ ಮಾಹಿತಿಯನ್ನಾಧರಿಸಿ ಖಡೇಬಜಾರ ಮತ್ತು ಉದ್ಯಮಬಾಗ ಠಾಣೆಯ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿದರು.ದೀಪಕ ಸುರೇಶ ಅಗಸಿಮನಿ (21), ದೇವರಾಜ ಯಲ್ಲಪ್ಪ ಪೂಜಾರಿ (21), ನಾಗರಾಜ ಚಿದಾನಂದ ತಳವಾರ (20), ಅಸ್ಲಂ ಮೌಲಾಸಾಬ ಶೇರೆಗಾರ (20), (ಎಲ್ಲರೂ ಎಕೆಪಿ ಫೌಂಡ್ರಿ ರೋಡ, ಲಕ್ಷೀ ನಗರ, ಉದ್ಯಮಬಾಗ) ಇವರನ್ನು ವಶಕ್ಕೆ ಪಡೆದುಕೊಂಡು ಕುಲಂಕಷವಾಗಿ ವಿಚಾರಣೆ ನಡೆಸಿದರು.ನಾಲ್ಕೂ ಜನರು ಬೆಳಗಾವಿ ನಗರ ವಿವಿಧ ಠಾಣೆಗಳಾದ ಖಡೇಬಜಾರ-1, ಟಿಳಕವಾಡಿ-1, ಉದ್ಯಮಬಾಗ-4, ಮಾಳಮಾರುತಿ-2 ಮತ್ತು ಅಂಕಲಗಿ ಗ್ರಾಮದಲ್ಲಿ -1 ಹೀಗೆ ಒಟ್ಟು 9 ಜಬರಿ ಕಳ್ಳತನಗಳನ್ನು ಮಾಡಿದ ಬಗ್ಗೆ ಒಪ್ಪಿಕೊಂಡಿದ್ದಾರೆ.ಆರೋಪಿತರಿಂದ ಎಲ್ಲ ಪ್ರಕರಣಗಳಲ್ಲಿ ಕಳ್ಳತನ ಮಾಡಿದ ಒಟ್ಟು 184 ಗ್ರಾಂ ಬಂಗಾರದ ಆಭರಣಗಳನ್ನು ಹಾಗೂ ಅಪರಾಧ ಕೃತ್ಯಗಳಿಗೆ ಬಳಸಿದ 2 ಪಲ್ಸರ ಮತ್ತು 1 ಹೀರೋ ಹೋಂಡಾ ಒಟ್ಟು 3 ಬೈಕ್‌ಗಳು ಹೀಗೆ ಆರೋಪಿತರಿಂದ ಒಟ್ಟು ರೂ. 8.98 ಲಕ್ಷ ರೂ. ಮಾಲನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.9 ಪ್ರಕರಣಗಳಲ್ಲಿ ಭಾಗಿಯಾಗಿ ಅಮಾಯಕ ಮಹಿಳೆಯರಿಂದ ಕಳ್ಳತನ ಮಾಡುತ್ತಿದ್ದ ಆರೋಪಿತರನ್ನು ಸೂಕ್ಷ್ಮ ಮಾಹಿತಿ ಕಲೆ ಹಾಕಲಾಗಿದೆ.

Share News

About admin

Check Also

ಒಂದು ಬೆಕ್ಕಿನ ಗರ್ಭ… ಎರಡು ಮನೆಗಳ ಗಲಾಟೆ! ಕೊನೆಗೆ ಪೊಲೀಸರೇ ‘ವಿಚಿತ್ರ ತೀರ್ಪು’ ಕೊಟ್ಟ ಕಥೆ!

ನಾಲ್ಕು ಮರಿಗಳು ಹುಟ್ಟಿದವು… ಆದರೆ ಕಸ್ಟಡಿ ಯಾರಿಗೆ..? ಪೊಲೀಸರನ್ನೇ ಕಂಗೆಡಿಸಿದ ಪ್ರಕರಣ! ಬೆಕ್ಕು ಗರ್ಭಿಣಿ… ನೆರೆಹೊರೆಯವರ ಗಲಾಟೆ! ಬೆಂಗಳೂರಿನಲ್ಲಿ ‘ವಿಚಿತ್ರ’ …

Leave a Reply

Your email address will not be published. Required fields are marked *