ತುಮಕೂರು: ತುಮಕೂರು ಗ್ರಾಮಾಂತರ ಜೆಡಿಎಸ್ ಶಾಸಕ ಡಿ.ಸಿ.ಗೌರಿಶಂಕರ್ ಮೀ-ಟೂ ಬಾಂಬ್ ಸಿಡಿಸಿದ್ದಾರೆ. ತುಮಕೂರಿನಲ್ಲಿ ಮೀ-ಟೂ ಅಭಿಯಾನದ ಬಗ್ಗೆ ಪ್ರತಿಕ್ರಿಯಿಸಿದ ಅವರು, ರಾಜಕಾರಣದಲ್ಲಿ ಮೀ-ಟೂ ಇದ್ಯೋ ಗೊತ್ತಿಲ್ಲ. ನಮ್ಮ ಪಕ್ಷದಲ್ಲಿ ಅಂತವರು ಯಾರೂ ಇಲ್ಲ. ಆದ್ರೆ, ಬಿಜೆಪಿಯಲ್ಲಿ ಇತ್ತೆನೋ ನನಗೇ ಗೊತ್ತಿಲ್ಲ ಅಂದರು.ಇದೇ ವೇಳೆ ನಟ ಅರ್ಜುನ್ ಸರ್ಜಾ ವಿರುದ್ಧ ಶ್ರುತಿ ಹರಿಹರನ್ ಮಾಡಿರುವ ಆರೋಪದ ಕುರಿತು ಮಾತನಾಡಿದ ಅವರು, ನಟಿ ಶ್ರುತಿ ಹರಿಹರನ್ ಇಷ್ಟು ದಿನ ಸುಮ್ಮನಿದ್ದದ್ದು ಸರಿಯಲ್ಲ. ದೌರ್ಜನ್ಯ ನಡೆದ ದಿನವೇ ಖಂಡಿಸಬೇಕಿತ್ತು. ಅವತ್ತು ಶ್ರುತಿ ಹರಿಹರನ್ ಏನ್ಮಾಡ್ತಿದ್ರು? ಅಂದೇ ಪ್ರಶ್ನೆ ಮಾಡಬಹುದಿತ್ತಲ್ವಾ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





