Breaking News

ಪೂರ್ವಾಂಚಲ ಎಕ್ಸ್​ಪ್ರೆಸ್ ವೇ ಉದ್ಘಾಟಿಸಿ, ಹಿಂದಿನ ಸರ್ಕಾರದ ವಿರುದ್ಧ ನಮೋ ವಾಗ್ದಾಳಿ

ಸುಲ್ತಾನ್​ಪುರ್ ​​(ಉತ್ತರಪ್ರದೇಶ): ದೇಶದಲ್ಲಿಯೇ ಅತೀ ಉದ್ದದ ಎಕ್ಸ್​​ಪ್ರೆಸ್ ಮಾರ್ಗ ಉತ್ತರಪ್ರದೇಶದ ಪೂರ್ವಾಂಚಲ ಎಕ್ಸ್​ಪ್ರೆಸ್ ​​ಹೆದ್ದಾರಿಯನ್ನು (Purvanchal Expressway) ಉದ್ಘಾಟನೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಹಿಂದಿನ ಸರ್ಕಾರದ ವಿರುದ್ಧ ನೇರವಾಗಿ ವಾಗ್ದಾಳಿ ನಡೆಸಿದರು.

ಉತ್ತರ ಪ್ರದೇಶದ ಸುಲ್ತಾನ್​ಪುರ್​ದಲ್ಲಿ ನಿರ್ಮಾಣವಾಗಿರುವ 340 ಕಿಲೋಮೀಟರ್​ ಉದ್ದದ ಪೂರ್ವಾಂಚಲ ಎಕ್ಸ್​ಪ್ರೆಸ್​ ಹೆದ್ದಾರಿಗೋಸ್ಕರ 22,500 ಕೋಟಿ ರೂ. ವೆಚ್ಚ ಮಾಡಲಾಗಿದೆ. ಪ್ರಧಾನಿ ಮೋದಿ ಅದರ ಉದ್ಘಾಟನೆ ಮಾಡಿದರು.

ಸುಮಾರು 1 ಗಂಟೆಗೂ ಅಧಿಕ ಕಾಲ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ(PM Narendra Modi), ಉತ್ತರ ಪ್ರದೇಶ ಹಿಂದುಳಿಯಲು ಈ ಹಿಂದೆ ಆಡಳಿತ ನಡೆಸಿರುವ ಸರ್ಕಾರಗಳು ನೇರವಾಗಿ ಕಾರಣವಾಗಿವೆ.ಹಿಂದಿನ ಸರ್ಕಾರಗಳು ಉತ್ತರ ಪ್ರದೇಶದ ಅಭಿವೃದ್ಧಿಯತ್ತ ಗಮನ ಹರಿಸಿರಲಿಲ್ಲ. ಕುಟುಂಬ ರಾಜಕಾರಣದಿಂದಾಗಿ ಭ್ರಷ್ಟಾಚಾರದಲ್ಲಿ ತೊಡಗಿಕೊಂಡು ರಾಜ್ಯದ ಅಭಿವೃದ್ಧಿಗೆ ಅಡ್ಡಿಯಾಗಿದ್ದವು ಎಂದರು.

ಉತ್ತರಪ್ರದೇಶ ಹಾಗೂ ಇಲ್ಲಿನ ಜನರ ಸಾಮರ್ಥ್ಯದ ಮೇಲೆ ಅನುಮಾನ ಇರುವವರು ಸುಲ್ತಾನ್​ಪುರಕ್ಕೆ ಬರಲಿ. ಈ ಜನರ ಸಾಮರ್ಥ್ಯ ಏನು ಎಂಬುದು ಅರ್ಥವಾಗಲಿದೆ. ಕಳೆದ 3-4 ವರ್ಷಗಳ ಹಿಂದೆ ಕೇವಲ ಒಂದು ತುಂಡು ಭೂಮಿಯಾಗಿದ್ದ ಈ ಸ್ಥಳದಲ್ಲಿ ಇದೀಗ ಆಧುನಿಕ ಎಕ್ಸ್​​​​ಪ್ರೆಸ್​ ವೇ ನಿರ್ಮಾಣವಾಗಿದೆ ಎಂದರು.

ಕಳೆದ ಮೂರು ವರ್ಷಗಳ ಹಿಂದೆ ಪೂರ್ವಾಂಚಲ ಎಕ್ಸ್​ಪ್ರೆಸ್​​ ವೇಗೆ ಶಂಕು ಸ್ಥಾಪನೆ ಮಾಡಿದಾಗ, ನಾನು ಮುಂದೊಂದು ದಿನ ವಿಮಾನದಲ್ಲಿ ಇಲ್ಲಿಗೆ ಬಂದು ಇಳಿಯುತ್ತೇನೆ ಎಂದು ಯೋಚನೆ ಮಾಡಿರಲಿಲ್ಲ. ಆದರೆ, ಈ ಎಕ್ಸ್​ಪ್ರೆಸ್​ ವೇ ಉತ್ತರಪ್ರದೇಶ ಆಧುನೀಕರಣ ಮುಖದ ಪ್ರತಿಬಿಂಬವಾಗಿದೆ. ಇಲ್ಲಿನ ಸಾಧನೆಗೆ ಜೀವಂತ ಸಾಕ್ಷಿಯಾಗಿದೆ ಎಂದರು.

ಪೂರ್ವಾಂಚಲ ಎಕ್ಸ್​ಪ್ರೆಸ್​ ವೇಗೆ ವಾಯುಪಡೆಯ ಸಿ-130 ಜೆ ಸೂಪರ್​ ಹರ್ಕ್ಯುಲಸ್​ ವಿಮಾನದಲ್ಲಿ ಬಂದಿಳಿದ ನಮೋಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಸಾಥ್ ನೀಡಿದರು. ಈ ವೇಳೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್​​ ಸಹ ಉಪಸ್ಥಿತರಿದ್ದರು.

Share News

About admin

Check Also

ಹಂಪಿ ಎಕ್ಸ್‌ಪ್ರೆಸ್ ರೈಲಿಗೆ ಆಕಸ್ಮಿಕ ಬೆಂಕಿ

ಬಳ್ಳಾರಿ : ಹಂಪಿ ಎಕ್ಸ್‌ಪ್ರೆಸ್ ರೈಲಿನ ಬೋಗಿಯೊಂದರಲ್ಲಿ ತಡರಾತ್ರಿ ಬೆಂಕಿ ಕಾಣಿಸಿಕೊಂಟು ಆತಂಕ ಸೃಷ್ಟಿಯಾದರೂ, ಅನಾಹುತ ಸಂಭವಿಸದೇ ಪ್ರಯಾಣಿಕರು ಪಾರಾದ …

Leave a Reply

Your email address will not be published. Required fields are marked *