ಬೆಂಗಳೂರು: ಉಡುಪಿ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾರಂಭವಾದ ಹಿಜಾಬ್-ಕೇಸರಿ ಶಾಲು ವಿವಾದದ ಬೆಂಕಿ ಇಂದು ರಾಜ್ಯಾದ್ಯಂತ ಹಬ್ಬಿ, ದೇಶ- ವಿದೇಶಗಳಲ್ಲೂ ಚರ್ಚೆ, ಪ್ರತಿಭಟನೆಗಳಿಗೆ ನಾಂದಿ ಹಾಡಿದೆ.ನಾವು ಕೋರ್ಟ್ ಆದೇಶ ಪಾಲಿಸುತ್ತೇವೆ ಎಂದು ವಿದ್ಯಾರ್ಥಿನಿಯರು ಹಿಜಾಬ್ ತೆಗೆದಿಟ್ಟು ತರಗತಿಗೆ ಬರುತ್ತಿದ್ದಾರೆ.
ಹೈಕೋರ್ಟ್ ಮಧ್ಯಂತರ ಆದೇಶದ ಬಳಿಕವೂ ವಿವಾದ ತಣ್ಣಗಾಗಿಲ್ಲ. ಹಿಜಾಬ್ ಹಾಕಿಕೊಂಡೇ ತರಗತಿಗೆ ಬರುತ್ತೇವೆ ಅವಕಾಶ ಕೊಡಿ ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದಾರೆ. ಅವಕಾಶ ಕೊಡದಿದ್ದಾಗ ತರಗತಿಯನ್ನೇ, ಪರೀಕ್ಷೆಯನ್ನೇ ಬಿಟ್ಟು ಹೋದ ಉದಾಹರಣೆಗಳಿವೆ. ಇನ್ನೊಂದೆಡೆ, ನಮಗೆ ಹಿಜಾಬ್ಗಿಂತ ಶಿಕ್ಷಣವೇ ಮುಖ್ಯ.
bigtvnews | Hubli Dharwad News | Kannada News | Karnataka News Hubli News | News In Hubli | Local news

