ಹುಬ್ಬಳ್ಳಿ: ಮನೆಯ ಜನರು ಊರಿಗೆ ಹೋಗಿದ್ದ ವೇಳೆಯನ್ನು ಪರಿಗಣಿಸಿ ಮನೆಗೆ ನುಗ್ಗಿದ ಖದೀಮರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕದ್ದು ಪರಾರಿಯಾಗಿದ್ದ ಘಟನೆ ನಗರದ ಕಿಮ್ಸ್ ಆಸ್ಪತ್ರೆ ಯ ಸಿಬ್ಬಂದಿಯ ವಸತಿ ಮನೆಯಲ್ಲಿ ನಡೆದಿದೆ.
ನಿನ್ನೆ ಎಲಿಜಬೆತ್ ಎಂಬುವ ನರ್ಸಿಂಗ್ ಸಿಬ್ಬಂದಿಯ ಮನೆಯಲ್ಲಿಯೇ ಕಳ್ಳರು ಕೈಚಳಕ ತೋರಿಸಿದ್ದು, ದೃಶ್ಯವು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ವಿದ್ಯಾನಗರದ ಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

