ಧಾರವಾಡ: ಪೇಡೆನಗರದ ರಜತಗಿರಿಯ ಬಹುರಾಷ್ಟ್ರೀಯ ಕಂಪನಿಯ ಉದ್ಯೋಗಿಯೊಬ್ಬ ನೇಣಿಗೆ ಶರಣಾಗಿದ್ದಾನೆ.ಅಭಿಷೇಕ ಮಹಾದೇವಪ್ಪ ಮಾಳಗಿ (29) ಎಂಬಾತನೇ ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡವನಾಗಿದ್ದು, ಈತ ಉತ್ತಮ ಕ್ರಿಕೆಟರ್ ಕೂಡ ಆಗಿದ್ದ. ಸ್ಥಳೀಯ ಎಸ್ಡಿಎಂ ಕ್ರಿಕೆಟ್ ಅಕಾಡೆಮಿ ಪರ ಆಟವಾಡುತ್ತಿದ್ದ. ಅಭಿಷೇಕ ಒಬ್ಬ ಒಳ್ಳೆ ವಿಕೇಟ್ ಕೀಪರ್ ಹಾಗೂ ಬ್ಯಾಟ್ಸ್ಮನ್ ಆಗಿದ್ದರು.
ಎಂಬಿಎ ಪದವೀಧರನಾಗಿದ್ದ ಈತ ಬಹುರಾಷ್ಟ್ರೀಯ ಕಂಪನಿಯ ಉದ್ಯೋಗಿಯಾಗಿದ್ದು, ನಿನ್ನೆ ರಾತ್ರಿ ಮನೆಯಲ್ಲೇ ನೇಣು ಹಾಕಿಕೊಂಡಿದ್ದು ಆದರೆ ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲವಾಗಿದೆ.ವಿದ್ಯಾಗಿರಿ ಪೊಲೀಸರು ಅಭಿಷೇಕ ನಿವಾಸಕ್ಕೆ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

