ಹುಬ್ಬಳ್ಳಿ: ಇಲ್ಲಿಯ ಗಂಗಾಧರ ನಗರದ ಸುಪ್ರಸಿದ್ಧ ಶ್ರೀ ಮಾರುತಿ ಮಂದಿರದ 50 ನೇ ವರ್ಷದ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಗಂಗಾಧರ್ ನಗರದ ಸಮಗ್ರ ಅಭಿವೃದ್ಧಿಗೆ ಈಗಾಗಲೇ ಕೋಟ್ಯಂತರ ರೂ . ಅನುದಾನ ನೀಡಿ ಸಾಕಷ್ಟು ಅಭಿವೃದ್ಧಿಪಡಿಸಿದ್ದು , ಈ ಭಾಗದ ಕಡು ಬಡ ಕುಟುಂಬದವರ ಕಲ್ಯಾಣ ಕಾರ್ಯಕ್ರಮಗಳಿಗೆ ಅನುಕೂಲ ಮಾಡಿಕೊಡಲು 5 ಕೋ.ರೂ.ಅನುದಾನದಲ್ಲಿ ಸುಸಜ್ಜಿತ ಸಮುದಾಯ ಭವನ ಸಹ ನಿರ್ಮಿಸುತ್ತಿದ್ದು , ಶೀಘ್ರದಲ್ಲೇ ಭವನದ ಕಾಮಗಾರಿ ಪೂರ್ಣಗೊಳ್ಳಲಿದೆ . ಸದರಿ ಭವನದ ಉದ್ಘಾಟನೆಗೆ ವೇದಿಕೆಯಲ್ಲಿನ ಎಲ್ಲ ಶ್ರೀಗಳು ಆಗಮಿಸುವಂತೆ ಭಕ್ತಿಯಿಂದ ಕೋರಿದ ಶಾಸಕ ಪ್ರಸಾದ್ ಅಬ್ಬಯ್ಯ ಅಲ್ಲದೇ , ಸದರಿ ಮಾರುತಿ ಮಂದಿರದ ಇನ್ನಷ್ಟು ಪ್ರಗತಿಗೆ ಅಗತ್ಯ ಅನುದಾನ ನೀಡುವುದಾಗಿ ಭರವಸೆ ನೀಡಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

