ಹುಬ್ಬಳ್ಳಿ: ಎಲ್ಲರಿಗೂ ಮೋದಿ ಎಂದು ಚಿರಪರಿಚಿತ ವಾದ ಹುಬ್ಬಳ್ಳಿ ಯ ಶ್ರೀ ಸಿದ್ಧಾರೂಢ ಮಠದ ಗೋ ಶಾಲೆ ಯ ಹಿರಿಯ ಹೋರಿ ಇಂದು ಉಭಯ ಸದ್ಗುರುಗಳಿಗೆ ತನ್ನ ಕೊನೆಯ ಸೇವೆ ಸಲ್ಲಿಸಿ ಕೊನೆ ಉಸಿರು ಎಳೆಯಿತು. ಈ ಹೋರಿಯು ಹುಟ್ಟಿನಿಂದಲೇ ಶ್ರೀ ಮಠದಲ್ಲಿ ಬೆಳೆದು ಈ ಹೋರಿ ಶ್ರೀ ಮಠದ ಸಭೆ ಸಮಾರಂಭ ಮೆರವಣಿಗೆ ಗಳಲ್ಲಿ ಮುಂಚೂಣಿ ವಹಿಸಿ ತನ್ನ ಸೇವೆ ಸಲ್ಲಿಸುತಿತ್ತು. ಆತ್ಮಕ್ಕೆ ಶಾಂತಿ ಸಿಗಲಿ ಮತ್ತೆ ಸದ್ಗುರುಗಳ ಸೇವೆಗೆ ಹುಟ್ಟಿ ಬಾ ಎಂದು ಮಠದ ಸದ್ಭಕ್ತರು ಮತ್ತು ಮಠದ ಅನುವಾಯಿಗಳು ವಿಷಾದ ವ್ಯಕ್ತ ಪಡಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

