ಹುಬ್ಬಳ್ಳಿ : ಪಿ ಎಸ್ ಐ ಪರೀಕ್ಷೆ ರದ್ದು ಕುರಿತು ಅಭ್ಯರ್ಥಿಗಳು ರಾಜ್ಯ ಸರ್ಕಾರ ವಿರುದ್ಧ ಆಕ್ರೋಶ ವನ್ನು ಹೊರಹಾಕಿದ್ದಾರೆ.
ಮಾಧ್ಯಮರೊಂದಿಗೆ ಮಾತನಾಡಿದ ಅಭ್ಯರ್ಥಿಗಳು, ಪರೀಕ್ಷೆ ಬರೆದು ನೇಮಕಾತಿ ಹೊಂದಿದವರ ಸಿ ಐ ಡಿ ತನಿಖೆ ಎದುರಿಸಿದ್ರು ರದ್ದು ಮಾಡಿದ್ದು ಖಂಡನೀಯವಾಗಿದೆ. ನಮಗೆ ಯಾವುದೇ ದಾರಿ ಇಲ್ಲ, ನಾವು ವಿಷ ಕುಡಿಯಬೇಕು ಅಷ್ಟೇ ಎಂದ ಅಭ್ಯರ್ಥಿಗಳು ತಮ್ಮ ನೋವುನ್ನು ಹೇಳಿದ್ದಾರೆ.
ಸರ್ಕಾರ ಸಿಐಡಿ ತನಿಖೆ ಎದುರಿಸಿ ಅಂತ ಹೇಳಿತ್ತು ಅದರಲ್ಲಿ ನಮ್ಮ ಎಲ್ಲ ಒರಿಜಿನಲ್ ದಾಖಲಾತಿಗಳನ್ನ ಈಗಾಗಲೇ ಸರ್ಕಾರಕ್ಕೆ ಸಲ್ಲಿಸಿದ್ದೇವೆ. ಇನ್ನೇನು ಎಲ್ಲಾವೂ ಮುಗಿದಿದೆ ಅನ್ನೋವಷ್ಟರಲ್ಲಿ ಹೀಗೆ ಆಗಿದೆ. ಯಾರೋ ಮಾಡಿದ ತಪ್ಪಿಗೆ ನಮಗೆ ಶಿಕ್ಷೆ ಯಾಕೆ
ಎಲ್ಲವೂ ತನಿಖೆ ಆಗಿದೆ, ಆದರೆ ತಪ್ಪಿತಸ್ತರನ್ನು ಬಿಟ್ಟು ನಮಗೆ ಈ ಶಿಕ್ಷೆ ನೀಡಿದ್ದು ಎಷ್ಟರಮಟ್ಟಿಗೆ ಸರಿ. ಕೂಡಲೇ ನಮಗೆ ನೇಮಕಾತಿ ಆದೇಶ ಅಭ್ಯರ್ಥಿಗಳ ಆಗ್ರಹಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

