ಹುಬ್ಬಳ್ಳಿ : ತ್ರಿಕೋಣ ಪ್ರೇಮ ಕಥೆಗೆ ಯುವಕನ ಹತ್ಯೆ ಆಗಿರುವ ಘಟನೆ ಹುಬ್ಬಳ್ಳಿಯ ನವನಗರ ಠಾಣೆ ವ್ಯಾಪ್ತಿಯಲ್ಲಿ
.

ಹಳೆ ಹುಬ್ಬಳ್ಳಿಯ ನೇಕಾರ ನಗರ ಮೂಲದ ವಿನಯ್ ಹತ್ಯೆಯಾದ ಯುವಕ. ಕಳೆದ ದಿನ ಯುವತಿಯ ಮಾಜಿ ಪ್ರೇಮಿ ಹುಬ್ಬಳ್ಳಿ ನವನಗರದ ರಾಘವೇಂದ್ರ 20 ವರ್ಷದ ವಿನಯ್ ನನ್ನು ಮಾತುಕತೆ ನೆಪದಲ್ಲಿ ಕರೆಸಿ , ನಗರದ ನಿರ್ಜನ ಪ್ರದೇಶದಲ್ಲಿ ಹತ್ಯೆ ಮಾಡಿ ಪರಾರಿಯಾಗಿದ್ದಾನೆ .
ವಿನಯ್ ಕಾಣೆ ಆಗುತ್ತಿದ್ದಂತೆ ಪೋಷಕರು ಪೊಲೀಸರ ಮೊರೆ ಹೋದಾಗ ಕೊಲೆ ನಡೆದಿರುವುದು ಬೆಳಕಿಗೆ ಬಂದಿದೆ.ಕೊಲೆಯಾದ 24 ಗಂಟೆಯಲ್ಲಿ ಕೊಲೆ ಆರೋಪಿಯನ್ನ ತಕ್ಷಣ ಬಂಧಿಸಿರುವ ನವನಗರ ಠಾಣೆ ಪೊಲೀಸರು ಆರೋಪಿ ರಾಘವೇಂದ್ರನನ್ನು ಬಂಧಿಸಿ
ವಿಚಾರಣೆ ನಡೆಸುತ್ತಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

