ಧಾರವಾಡ: ಚಂಡಮಾರುತ ಹವಾಮಾನ ವೈಪರಿತ್ಯದಿಂದ ಧಾರವಾಡದಾದ್ಯಂತ ಬಿರುಸಿನ ಮಳೆಯಾಗುತ್ತಿದ್ದು , ಇದರಿಂದ ಜನಜೀವನ ಅಸ್ತವ್ಯಸ್ತವಾಗಿದೆ .
ಅಷ್ಟೇ ಅಲ್ಲದೇ ಜಿಲ್ಲೆಯಾದ್ಯಂತ ಕೆಲ ಮನೆಗಳಿಗೆ ತೀವ್ರ ಹಾನಿಯಾಗಿದ್ದರೆ , ಸುಮಾರು 50 ಕ್ಕೂ ಹೆಚ್ಚು ಮನೆಗಳು ಭಾಗಶಃ ಧರೆಗುರುಳಿವೆ . ಇಂದು 13 ಮನೆಗಳು ಭಾಗಶಃ ಬಿದ್ದಿದ್ದು , ಕುಂದಗೋಳದಲ್ಲಿ ನಿನ್ನೆ ರಾತ್ರಿ 18 ಹಾಗೂ ನವಲಗುಂದದಲ್ಲಿ 12 ಮನೆಗಳು ಹಾನಿಯಾಗಿವೆ.ನಿನ್ನೆ ರಾತ್ರಿಯಿಂದಲೇ ಆರಂಭವಾಗಿರುವ ಮಳೆ ಬಿಟ್ಟೂ ಬಿಡದೇ ಸುರಿಯುತ್ತಿದೆ.ಮಳೆಯ ಪರಿಣಾಮ ಧಾರವಾಡ ತಾಲೂಕಿನ ವಿವಿಧ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕೂಡ ಕಡಿತಗೊಂಡಿದೆ . ಮುಂಗಾರು ಪ್ರವೇಶಕ್ಕೂ ಮುನ್ನವೇ ಚಂಡಮಾರುತ ಎಫೆಕ್ಸ್ನಿಂದಾಗಿ ಮಳೆ ಸುರಿಯುತ್ತಿದೆ .
bigtvnews | Hubli Dharwad News | Kannada News | Karnataka News Hubli News | News In Hubli | Local news

