ಕಲಘಟಗಿ: ಪಟ್ಟಣದ ಪಶು ವೈದ್ಯಾಧಿಕಾರಿಗಳು ಸಮಯಕ್ಕೆ ಸರಿಯಾಗಿ ಬಾರದಿರುವುದಕ್ಕೆ ಆಕಳೊಂದು ಮೃತಪಟ್ಟಿರುವ ಘಟನೆ ಕಲಘಟಗಿ ತಾಲೂಕಿನ ಮಾಚಾಪುರ ಗ್ರಾಮದಲ್ಲಿ ನಿನ್ನೆ ಸಂಜೆ ನಡೆದಿದೆ . ದೇವರ ಹೆಸರಿನಲ್ಲಿ ಬಿಟ್ಟ ಆಕಳೊಂದು ಹಸು ಹಾಕುವ ಸಂದರ್ಭದಲ್ಲಿ ತೀವ್ರ ನೋವಿನಂದ ಒದ್ದಾಡುವುದನ್ನು ಕಂಡ ಗ್ರಾಮಸ್ಥರು ಕೂಡಲೇ ಪಶುವೈದ್ಯರಿಗೆ ಕರೆ ಮಾಡಿದ್ದಾರೆ . ಆದರೆ ವೈದ್ಯರು ಸೂಕ್ತ ಸಮಯಕ್ಕೆ ಸ್ಥಳಕ್ಕೆ ಆಗಮಿಸದಿರುವುದಕ್ಕೆ ಆಕಳು ಮೃತಪಟ್ಟಿದೆ . ಇನ್ನು ವೈದ್ಯರ ನಿರ್ಲಕ್ಷದಿಂದಲೇ ಆಕಳು ಮೃತಪಟ್ಟಿದೆ ಎಂದು ಸಾರ್ವಜನಿಕರು ವೈದ್ಯರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ .
bigtvnews | Hubli Dharwad News | Kannada News | Karnataka News Hubli News | News In Hubli | Local news

