Breaking News

ನಿಮ್ಮ ಕಾಲು ಮುಗೀತಿನಿ , ನನ್ನ ಹೊರಗಡೆ ತೆಗೆಯಿರಿ ; ಗೋಳಿಟ್ಟ ಲಾರಿ ಚಾಲಕ

ಧಾರವಾಡ : ನಿನ್ನೆ ( ಮಂಗಳವಾರ ) ತಡರಾತ್ರಿ ಹುಬ್ಬಳ್ಳಿ ಹೊರವಲಯದ ಪುಣೆ – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮಧ್ಯೆ ಲಾರಿ ಹಾಗೂ ಖಾಸಗಿ ಬಸ್ ಮಧ್ಯೆ ಸಂಭವಿಸಿದ ಭೀಕರ ಅಪಘಾತದ ಒಂದು ದೃಶ್ಯ ಇದೀಗ ಲಭ್ಯವಾಗಿದೆ ಲಾರಿ ಹಾಗೂ ಬಸ್‌ನ ಮಧ್ಯೆ ಅಪಘಾತ ಸಂಭವಿಸುತ್ತಿದ್ದಂತೆ ಕೆಲ ಸ್ಥಳೀಯರು ಆ ಜಾಗದಲ್ಲಿ ಜಮಾಯಿಸಿದ್ದರು .

ಕೆಲವರು ಸ್ಥಳದಲ್ಲೇ ಸಾವನ್ನಪ್ಪಿ , ಮೃತ ದೇಹಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು . ಲಾರಿ ಚಾಲಕ ತೀವ್ರವಾಗಿ ಗಾಯಗೊಂಡು ಲಾರಿ ಅವಶೇಷಗಳಡಿ ಸಿಲುಕಿಕೊಂಡು ಒದ್ದಾಡುತ್ತಿದ್ದ

ನಿಮ್ಮ ಕಾಲು ಮುಗೀತಿನಿ ನನ್ನ ಹೊರಗಡೆ ತೆಗೆಯಿರಿ ಬಹಳ ನೋವಾಗುತ್ತಿದೆ ಅಣ್ಣಾ ದಯವಿಟ್ಟು ಹೊರಗಡೆ ತೆಗೆಯಿರಿ ‘

ಎಂದು ಅಂಗಲಾಚುತ್ತಿದ್ದ . ಆದರೆ , ಅಲ್ಲಿದ್ದ ಕೆಲವರು ಏನೂ ಮಾಡಲಾಗದ ಪರಿಸ್ಥಿತಿಯಲ್ಲಿ ಅಸಹಾಯಕರಾಗಿ ನಿಂತಿದ್ದರು .

Share News

About BigTv News

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *