ಹುಬ್ಬಳ್ಳಿ : ರಾಜಸ್ಥಾನದ ಉದಯಪುರದ ಹಿಂದೂ ಕಾರ್ಯಕರ್ತ ಟೈಲರ್ ಕನ್ಹಯ್ಯ ಲಾಲ ಅವರ ಹತ್ಯೆ ಖಂಡಿಸಿ ನಗರದ ಸಂಗೊಳಿ ರಾಯಣ್ಣ ವೃತ್ತದಲ್ಲಿ ಬಿಜೆಪಿ ಜಿಲ್ಲಾ ಅಲ್ಪಸಂಖ್ಯಾತ ಘಟಕದಿಂದ ಗುರುವಾರ ಪ್ರತಿಭಟನೆ ನಡೆಸಿದರು.
ಎಲ್ಲ ಧರ್ಮದವರು ಸೇರಿ ಬಾಳುವ ದೇಶದಲ್ಲಿ. ಉದಯಪುರದ ಹತ್ಯೆ ನಿಜಕ್ಕೂ ಖಂಡನೀಯ. ರಾಜಸ್ಥಾನ ಕಾಂಗ್ರೆಸ್ ಸರ್ಕಾರ ದುರಾಡಳಿತದಿಂದ ಇಂತಹ ಕೃತ್ಯ ನಡೆಯುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದತ್ತಮೂರ್ತಿ ಕುಲಕರ್ಣಿ, ಮುಸ್ತಾಕ ಕುಂಬಿ, ರಾಜು ಜೋಸೆಫ್, ಅಶ್ಮ ಖಾನ ಕರಮಡಿ ಭಾಗಿಯಾಗಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





