ಬೆಂಗಳೂರು: ರಾಯಚೂರನ್ನ ತೆಲಂಗಾಣಕ್ಕೆ ಸೇರಿಸೋ ಬಗ್ಗೆ ಅಲ್ಲಿನ ಜನ ಮಾತನಾಡ್ತಿದ್ದಾರೆ ಅಂತ ತೆಲಂಗಾಣ ಸಿಎಂ ಹೇಳಿಕೆ ಕೊಟ್ಟಿದ್ರಲ್ಲ ಅದಕ್ಕೆ ಈಗ ಸಿಎಂ ಬಸವರಾಜ ಬೊಮ್ಮಾಯಿ ತಿರುಗೇಟು ಕೊಟ್ಟಿದ್ದಾರೆ. ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ ರಾವ್ ನೀಡಿರೋ ಹೇಳಿಕೆ ರಾಜಕೀಯ ಪ್ರೇರಿತ.
ತೆಲಂಗಾಣದ ಸಮಸ್ಯೆ ಡೈವರ್ಟ್ ಮಾಡೋಕೆ ಈ ಹೇಳಿಕೆ ನೀಡಿದ್ದಾರೆ. ತೆಲಂಗಾಣ ಹಿಂದುಳಿದಿದೆ ಅಂತ ಹೋರಾಟ ಮಾಡಿ, ಪ್ರತ್ಯೇಕ ರಾಜ್ಯ ತೆಗೊಂಡ್ರು. ಆದ್ರೆ ಅದು ಇನ್ನೂ ಹಿಂದುಳಿದಿದೆ. ನಾವೂ ರಾಯಚೂರನ್ನು ಸಂಪೂರ್ಣ ಅಭಿವೃದ್ಧಿ ಮಾಡುತ್ತೇವೆ. ಒಂದಿಂಚು ಜಾಗ ಕೊಡಲ್ಲ ಅಂತ ಹೇಳಿದ್ರು.