ಹುಬ್ಬಳ್ಳಿ : ಖಾಸಗಿ ಸಹಭಾಗಿತ್ವದಲ್ಲಿ ಇಲ್ಲಿನ ಕೆ ಸಿ ಸರ್ಕಲ್ ಬಳಿ ನಿರ್ಮಿಸಲಾಗಿದ್ದ ಶುಲಭ ಶೌಚಾಲಯ ಏಕಾಏಕಿ ನೆಲಸಮ ಮಾಡಲಾಗಿದೆ. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಉದ್ಘಾಟಿಸಿದ್ದ ಶುಲಭ ಶೌಚಾಲಯ ನೆಲಸಮ ಮಾಡಲಾಗಿದೆ.
ಸುಮಾರು ಒಂಬತ್ತು ವರ್ಷ ಗತಿಸುವಷ್ಟರಲ್ಲಿ ಅದನ್ನು ನೆಲಸಮ ಮಾಡಿರುವುದಕ್ಕೆ ಸಾರ್ವಜನಿಕರು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕ್ರಮಕ್ಕೆ ಕಿಡಿಕಾರುತ್ತಿದ್ದಾರೆ.