ಹುಬ್ಬಳ್ಳಿ: ಮೀಸೋ ಆ್ಯಪ್ನಲ್ಲಿ ಲಕ್ಕಿ ಡ್ರಾ ಬಂದಿದೆ ಎಂದು ಲಿಂಗರಾಜ ನಗರದ ಲಕ್ಷ್ಮಿಬಾಯಿ ಅವರ ಮೊಬೈಲ್ಗೆ ಸಂದೇಶ ಕಳುಹಿಸಿದ ವ್ಯಕ್ತಿ, ಅವರಿಂದ ₹8.98 ಲಕ್ಷ ವರ್ಗಾಯಿಸಿಕೊಂಡು ವಂಚಿಸಿದ್ದಾನೆ.
ಮೀಸೋ ಆ್ಯಪ್ನಲ್ಲಿ ಲಕ್ಷ್ಮಿಬಾಯಿ ತರಕಾರಿ ಖರೀದಿಸುತ್ತಿದ್ದರು. ಅಲ್ಲಿಂದ ಅವರ ಮಾಹಿತಿ ಪಡೆದ ವಂಚಕ, ಆ್ಯಪ್ನಿಂದ ₹12 ಲಕ್ಷ ಲಕ್ಕಿ ಡ್ರಾ ಬಂದಿದ್ದು, ಖಾತೆಗೆ ವರ್ಗಾಯಿಸಲು ತೆರಿಗೆ ಪಾವತಿಸಬೇಕಾಗುತ್ತದೆ ಎಂದು ನಂಬಿಸಿದ್ದಾನೆ. ನಂತರ, ಅವರ ವಾಟ್ಸ್ಆ್ಯಪ್ಗೆ ಕ್ಯೂಆರ್ ಕೋಡ್ ಕಳುಹಿಸಿ ಸ್ಕ್ಯಾನ್ ಮಾಡುವಂತೆ ಹೇಳಿ ಹಣ ವರ್ಗಾಯಿಸಿಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

