ಧಾರವಾಡ : ರಾಜ್ಯದಲ್ಲಿ ಹಲವು ಗಲಭೆಗಳನ್ನು ಸೃಷ್ಟಿ ಮಾಡಿ ಹಿಂದೂ ಕಾರ್ಯಕರ್ತರನ್ನು ಕೊಲೆ ಮಾಡಿರುವ ಪಿಎಫ್ಐ ಹಾಗೂ ಎಸ್ ಡಿಪಿಐ ಸಂಘಟನೆಗಳನ್ನು ರಾಜ್ಯದಲ್ಲಿ ಬ್ಯಾನ್ ಮಾಡುವಂತೆ ನಾವು ಹಲವು ಭಾರಿ ಬೀದಿಗಳಿದು ಹೋರಾಟ ಮಾಡಿದ್ದೇವು. ಗಲಭೆ, ಕೊಲೆಗಳಲ್ಲಿ ಪಿಎಪ್ ಆಯ್ , ಎಸ್ ಡಿಪಿಐ ಭಾಗಿಯಾಗಿದ್ದರ ಬಗ್ಗೆ ಸಾಕ್ಷಿ ಇವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮಾಹಿತಿ ಇದೆ. ಬ್ಯಾನ್ ಮಾಡಲು ಸರ್ಕಾರಗಳು ಮೀನಾಮೇಷ ಮಾಡುತ್ತಿವೆ ಎಂದು ಶ್ರೀ ರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ಹಲವೆಡೆ ಎನ್ಐಎ ದಾಳಿ ಹಿನ್ನೆಲೆಯಲ್ಲಿ ಧಾರವಾಡದಲ್ಲಿ ಮಾತನಾಡಿದ ಪ್ರಮೋದ್ ಮುತಾಲಿಕ್ ನಿನ್ನೆ ಪಿಎಫಐನ ಪ್ರಮುಖರ ಕಚೇರಿ ಮೆಲೆ ಎನ್ಐಎ ದಾಳಿ ಮಾಡಿದೆ. ಅಲ್ಲಿ ಯಾವ ದಾಖಲಾತಿಗಳು ಸಿಗುತ್ತದೆ, ಲಕ್ಷಗಟ್ಟಲೇ ಹಣ ಸೀಜ್ ಆಗಿದೆ ಅನ್ನೋದು ಗೊತ್ತಿದೆ. ನೂರಕ್ಕೆ ನೂರರಷ್ಟು ಅವರು ದೇಶದ್ರೋಹಿ ಕೆಲಸ ಮಾಡುತ್ತಿದ್ದಾರೆ ಎಂದು ಮುತಾಲಿಕ್ ಹೇಳಿದರು.
ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತನ ಕಗ್ಗೊಲೆ, ದಕ್ಷಿಣ ಕನ್ನಡದಲ್ಲಿಯೂ ಕೊಲೆ ಪ್ರಕರಣದಲ್ಲಿ ಅಷ್ಟೇ ಅಲ್ಲದೇ ಹಿಜಾಬ್, ರುದ್ರೆಶ್ , ನೆಟ್ಟಾರ ಕೊಲೆ, ಹಿಂದೂ ನಾಯಕರ ಕೊಲೆಯಲ್ಲಿ ಭಾಗಿಯಾಗಿದ್ದರಿಂದ ಸಂಘಟನೆ ಹೆಸರು ಕೂಡಾ ಎಫ್ಆರ್ ಐ ನಲ್ಲಿ ಉಲ್ಲೇಖ ಮಾಡಿದ್ದಾರೆ. ಇಷ್ಟೆಲ್ಲಾ ದಾಖಲೆಗಳು ಇದ್ರೂ ಸರ್ಕಾರಗಳು ಯಾಕೆ ಬ್ಯಾನ್ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಿಎಫ್ಐ ಹಾಗೂ ಎಸ್ ಡಿಪಿಐ ಅವರ ಚಟುವಟಿಕೆಗಳನ್ನು ಸರ್ಕಾರ ಸಮಗ್ರವಾಗಿ ತನಿಖೆ ಮಾಡಬೇಕು. ಅವರ ಸಂಪೂರ್ಣ ಜನ್ಮವನ್ನು ಜಾಲಾಡಬೇಕು. ಅದರಿಂದ ಸಾಕಷ್ಟು ವಿಚಾರಗಳು ಹೊರಬರುತ್ತವೆ. ರಾಜ್ಯದಲ್ಲಿ ನಡೆದಂತಹ ದೇಶದ್ರೋಹಿ ಚಟುವಟಿಕೆಗಳು ಹಾಗೂ ಹಿಂದೂ ಕಾರ್ಯಕರ್ತರ ಕಗ್ಗೊಲೆ, ಗಲಭೆ ಅಶಾಂತಿಗಳಿಗೆ ಈ ಸಂಘಟನೆಗಳು ಮೂಲ ಕಾರಣ ಎಂದು ಅವರು ಹೇಳಿದರು.
ಅವರನ್ನ ಪರ್ಮನೆಂಟ್ ಆಗಿ ಜೈಲಿಗೆ ಹಾಕಬೇಕು. ಬಿಹಾರದಲ್ಲಿ ಇಬ್ಬರು ಸಿಕ್ಕಾಕಿಕೊಂಡಿದ್ದಾರೆ. ಮುಂದಿನ ಕೆಲ ವರ್ಷಗಳಲ್ಲಿ ಇಸ್ಲಾಂ ರಾಷ್ಟ್ರವನ್ನಾಗಿ ಘೋಷಣೆ ಮಾಡುತ್ತೇವೆ ಅಂತ ಹೇಳಿದ್ರು. ಕೋಟಿಗಟ್ಟಲೆ ಅಕ್ರಮವಾಗಿ ಹಣ ವರ್ಗಾವಣೆ ಆಗಿದ್ದರ ಬಗ್ಗೆ ಎಲ್ಲರಿಗೂ ಗೊತ್ತಿದೆ. ಪಿಎಪ್ ಐ ನಿರಂತರ ಚಟುವಟಿಕೆಗಳನ್ನು ಮಾಡುತ್ತಿದೆ. ಇಷ್ಟಾದರೂ ಸರ್ಕಾರಗಳು ಏಕೆ ಮೀನಾಮೇಷ ಎಣಿಸುತ್ತಿವೆ ಎಂದು ಅವರು ಪ್ರಶ್ನೆ ಮಾಡಿದರು.
ಹುಬ್ಬಳ್ಳಿಯಲ್ಲಿ ಪಿಎಪ್ಐ ರಾಜ್ಯಾದ್ಯಕ್ಷರ ಜೊತೆ ಸಭೆ ಮಾಡಿದ್ದಾರೆ. ಇವರು ದೇಶದ್ರೋಹ ಕೆಲಸ ಮಾಡುತ್ತಾರೆ ಅರೆಸ್ಟ ಆಗ್ತಾರೆ ಬೇಲ್ ಮೇಲೆ ಹೊರಗಡೆ ಬರ್ತಾರೆ. ಇವರು ಸಂವಿಧಾನದ ವಿರೋಧಿ ಚಟುವಟಿಕೆ ಮಾಡುತ್ತಾರೆ. ಹೈಕೋರ್ಟ್ ವಿರುದ್ದವೇ ಇವರು ಪ್ರತಿಭಟನೆ ಮಾಡಿದರು. ಖುರಾನ್ ಆಧಾರದ ಮೇಲೆ ಈ ಸಂಘಟನೆಗಳು ಇಸ್ಲಾಂಮಿ ಕಡೆ ಹೊರಟ್ಟಿದ್ದಾರೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಈ ದುಷ್ಟ ಶಕ್ತಿಗಳನ್ನ ಮಟ್ಟ ಹಾಕುವಂತಹ ಕೆಲಸವನ್ನು ಮಾಡಬೇಕು. ಇವರ ಎಲ್ಲಾ ಚಟುವಟಿಕೆಗಳ ಮೇಲೆ ನಿಗಾ ವಹಿಸಬೇಕು. ಕೂಡಲೇ ಇವರನ್ನು ಬಂಧಿಸಿ ಸೂಕ್ತ ತನಿಖೆ ನಡೆಸಿದ್ರೆ ಇನ್ನೂ ಭಯಾನಕ ಸತ್ಯಗಳು ಹೊರಗೆ ಬರುತ್ತವೆ. ಮುಂದೆ ದೊಡ್ಡ ಆತಂಕಗಳು ಎದುರಾಗುವ ಮುಂಚೆಯೇ ಸಂಘಟನೆಗಳನ್ನು ಬ್ಯಾನ್ ಮಾಡಬೇಕು ಎಂದರು. ನಾನು ಈ ಕುರಿತು ಆಂದೋಲನ ಆರಂಭ ಮಾಡುತ್ತೇನೆ ಎಂದು ಪ್ರಮೋದ್ ಮುತಾಲಿಕ್ ಧಾರವಾಡದಲ್ಲಿ ಹೇಳಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

