ಧಾರವಾಡ:ಧಾರವಾಡದಲ್ಲಿ ಕಂಪ್ಯೂಟರ್ ಅಂಗಡಿ ಇಟ್ಟುಕೊಂಡಿದ್ದ ಅಮೋಲ್ ಜನರ ವಿಶ್ವಾಸ ಗಳಿಸಿದ್ದು, ಅವರ ಬಳಿ ಕೋಟ್ಯಾಂತರ ರೂಪಾಯಿ ಪಡೆದುಕೊಂಡು ದಂಪತಿ ಧಾರವಾಡವನ್ನೇ ಬಿಟ್ಟು ಹೋಗಿರುವ ಘಟನೆ ನಡೆದಿದೆ.
ಮೂಲತಃ ಬೀದರ್ ಜಿಲ್ಲೆಯ ಔರಾದ್ ತಾಲೂಕಿನವರು ಎಂದು ಹೇಳಿಕೊಂಡು ಬಂದಿದ್ದ ಅಮೋಲ್ ಮೊಕಾಶಿ ಹಾಗೂ ಆತನ ಪತ್ನಿ ಅಪರ್ಣಾ ಮೊಕಾಶಿ, ಕಳೆದ 15 ವರ್ಷಗಳಿಂದ ಧಾರವಾಡದಲ್ಲೇ ವಾಸವಾಗಿದ್ದರು.
ಅದೇ ವಿಶ್ವಾಸದ ಮೇಲೆ ಧಾರವಾಡದ ಅನೇಕರ ಬಳಿ ಕಂಪ್ಯೂಟರ್ ತರಬೇಕು, ಸಿಸಿ ಕ್ಯಾಮೆರಾ ತರಬೇಕು ಎಂದು 5-10 ಲಕ್ಷ ನೆಫ್ಟ್ ಮೂಲಕ ಪಡೆದಿದ್ದ. ಹೀಗೆ ಅನೇಕರ ಬಳಿ ಹಣ ಪಡೆದು ಕೋಟ್ಯಾಂತರ ರೂಪಾಯಿ ಮಾಡಿಕೊಂಡು ಇದೀಗ ಧಾರವಾಡ ಬಿಟ್ಟು ಪತ್ನಿ ಸಮೇತ ಎಸ್ಕೆಪ್ ಆಗಿದ್ದಾನೆ.ಈ ರೀತಿ ಮೋಸಕ್ಕೊಳಗಾದ ವ್ಯಕ್ತಿಯೊಬ್ಬರು ಧಾರವಾಡದ ಶಹರ ಠಾಣೆಯಲ್ಲಿ ದೂರು ದಾಖಲಿಸಲು ಮುಂದಾಗಿದ್ದರು. ಇದು ಕೋಟ್ಯಾಂತರ ರೂಪಾಯಿ ಮೋಸದ ವ್ಯವಹಾರವಾಗಿರುವುದರಿಂದ ಸದ್ಯ ಈ ಪ್ರಕರಣವನ್ನು ಸಿಸಿಬಿಗೆ ಹಸ್ತಾಂತರಿಸಲಾಗಿದೆ. ದೂರು ದಾಖಲಿಸಿಕೊಂಡಿರುವ ಸಿಸಿಬಿ ಪೊಲೀಸರು ಇದೀಗ ಈ ಪ್ರಕರಣದ ಬೆನ್ನು ಬಿದ್ದಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

