Breaking News

SPECIAL NEWS

ಬೆಂಗಳೂರು-ಹುಬ್ಬಳ್ಳಿ ನಡುವೆ ಮತ್ತೊಂದು ವಿಮಾನ ಬೇಡಿಕೆಗೆ ಒಪ್ಪಿಗೆ ಸಿಕ್ಕಿದೆ.

ಹುಬ್ಬಳ್ಳಿ ನಡುವೆ ಪ್ರತಿದಿನ ಸಂಚಾರ ನಡೆಸುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಈಗ ಉಭಯ ನಗರಗಳ ನಡುವೆ ಮತ್ತೊಂದು ವಿಮಾನ ಸಂಚಾರ ಆರಂಭವಾಗುತ್ತಿದ್ದು, ಉತ್ತರ ಕರ್ನಾಟಕ ಭಾಗದ ಜನರಿಗೆ ಅನುಕೂಲವಾಗಲಿದೆ.ರಾಜಧಾನಿ ಬೆಂಗಳೂರು ಮತ್ತು ಉತ್ತರ ಕರ್ನಾಟಕದ ನಡುವೆ ಸಂಚಾರ ಇನ್ನಷ್ಟು ಸುಲಭವಾಗಲಿದೆ. ಬೆಂಗಳೂರು-ಹುಬ್ಬಳ್ಳಿ ನಡುವೆ ಮಧ್ಯಾಹ್ನ ವಿಮಾನ ಬೇಕು ಎಂಬ ಬೇಡಿಕೆಗೆ ಒಪ್ಪಿಗೆ ಸಿಕ್ಕಿದೆ. ಇಂಡಿಗೋ ವಿಮಾನಯಾನ ಸಂಸ್ಥೆ ಮಾರ್ಚ್‌ 30ರಿಂದಲೇ ಹುಬ್ಬಳ್ಳಿ-ಬೆಂಗಳೂರು ನಗರದ ನಡುವೆ 3ನೇ ವಿಮಾನ ಹಾರಾಟವನ್ನು …

Read More »

ವಿಶೇಷ ಚೇತನ, ಬಡ ಮಕ್ಕಳ ಬಾಳಿಗೆ ಬೆಳಕಾದ ರಾಯಚೂರಿನ ಶಿಕ್ಷಕ ದಂಪತಿ

ಮಸ್ಕಿ ಪಟ್ಟಣದ ರಾಮಣ್ಣ ಹಾಗೂ ಶೃತಿ ದಂಪತಿಯ ವಿವಾಹವಾಗಿ 15 ವರ್ಷ ಕಳೆದರೂ ಇನ್ನೂ ಮಕ್ಕಳಾಗಿಲ್ಲ. ರಾಮಣ್ಣ ಅವರು ಮಸ್ಕಿ ಪಟ್ಟಣದ ಕಾಲೇಜುವೊಂದರಲ್ಲಿ ಉಪನ್ಯಾಸರಾಗಿ ಕೆಲಸ ಮಾಡುತ್ತಿದ್ದರೇ, ಶೃತಿ ಕಂಪ್ಯೂಟರ್ ಶಿಕ್ಷಕಿಯಾಗಿದ್ದಾರೆ.ವಿವಾಹವಾಗಿ 15 ವರ್ಷ ಕಳೆದರೂ ಮಕ್ಕಳಾಗಿಲ್ಲ ಎಂಬ ಚಿಂತೆಯಲ್ಲಿ ದಂಪತಿ ಅದೆಷ್ಟೋ ದೇವರಿಗೆ ಹರಕೆ ಹೊತ್ತಿದರೂ, ಅದೆಷ್ಟೋ ವೈದ್ಯರಲ್ಲಿ ಚಿಕಿತ್ಸೆ ಪಡೆದಿದರೂ ಸಂತಾನ ಭಾಗ್ಯ ಮಾತ್ರ ಪ್ರಾಪ್ತಿಯಾಗಿಲ್ಲ.ದಂಪತಿ ತಮ್ಮ ಸ್ವಂತ ದುಡಿಮೆಯಲ್ಲಿನ ಹಣವನ್ನೇ ಈ ಮಕ್ಕಳಿಗಾಗಿ ಬಳಕೆ ಮಾಡುತ್ತಿದ್ದಾರೆ. …

Read More »

ಕೆಕೆಆರ್ ವಿರುದ್ಧ ವಿರಾಟ್‌ ಕೊಹ್ಲಿ ಐತಿಹಾಸಿಕ ದಾಖಲೆ.

ಐಪಿಎಲ್‌ 18ನೇ ಆವೃತ್ತಿಯ ಆರಂಭಿಕ ಪಂದ್ಯ ಮುಕ್ತಾಯವಾಗಿದೆ. ಉದ್ಘಾಟನಾ ಪಂದ್ಯದಲ್ಲಿ ಕೆಕೆಆರ್ ತಂಡವನ್ನು ಆರ್‌ಸಿಬಿ ಸಲಭವಾಗಿ ಮಣಿಸಿದೆ. ಇದೇ ವೇಳೆ ಆರ್ಸಿಬಿ ಪರ ಆಡಿದ ವಿರಾಟ್‌ ಕೊಹ್ಲಿ ಅವರು ಕೊಲ್ಕತ್ತಾ ವಿರುದ್ಧ ವಿಶೇಷ ದಾಖಲೆಯನ್ನು ನಿರ್ಮಾಣ ಮಾಡಿದ್ದಾರೆ.ಐಪಿಎಲ್ 2025ರ ಕೆಕೆಆರ್ ಮತ್ತು ಆರ್‌ಸಿಬಿ ನಡುವಿನ ಆರಂಭಿಕ ಪಂದ್ಯದಲ್ಲಿ ಕಿಂಗ್‌ ಕೊಹ್ಲಿ ಕೆಕೆಆರ್ ವಿರುದ್ಧ 59 ರನ್‌ಗಳನ್ನು ಬಾರಿಸುವ ಮೂಲಕ ಒಟ್ಟು 1,008 ರನ್‌ಗಳನ್ನು ಕಲೆಹಾಕಿದ ಕೀರ್ತಿಗೆ ಪಾತ್ರರಾಗಿದ್ದಾರೆ.

Read More »

ದೇಶದ ಅತ್ಯಂತ ಕಿರಿಯ ಅಂಗದಾನಿ!”ಧನಿಷ್ಠ “

ದೆಹಲಿಯ 20 ತಿಂಗಳ ಪುಟ್ಟ ಬಾಲಕಿ ತನ್ನ ಮನೆಯ ಮಹಡಿಯ ಮೇಲಿಂದ ಬಿದ್ದು ಪ್ರಾಣ ಕಳೆದುಕೊಂಡಿದ್ದಳು. ತಂದೆ ತಾಯಿಯು ಈ ಮಗುವಿನ ಹೃದಯ ಕಣ್ಣು ಮೂತ್ರಪಿಂಡ ಯಕೃತ್ತು ಮತ್ತು ಎರಡು ಕಾರ್ನಿಯಾ ಗಳನ್ನು ದಾನ ಮಾಡುವ ಮೂಲಕ ಐದು ಜನರ ಪ್ರಾಣವನ್ನು ಉಳಿಸಿದ್ದಾರೆ. “ಧನಿಷ್ಠ” ಎಂಬ ಹೆಣ್ಣು ಮಗು ಅಂಗಾಂಗಗಳ ದಾನ ಮಾಡುವ ಮೂಲಕ ದೇಶದ ಅತ್ಯಂತ ಕಿರಿಯ ಅಂಗದಾನಿಯಾಗಿದ್ದಾಳೆ

Read More »

ಹಾವೇರಿ:ಆಲದಮ್ಮ ಜಾತ್ರಾ ಮಹೋತ್ಸವ.

ಇಂದು ಹಾವೇರಿ ಜಿಲ್ಲೆಯ ಬಸ್ಸಾಪುರ ಗ್ರಾಮದಲ್ಲಿ ಆಲದಮ್ಮ ಜಾತ್ರಾಮಹೋತ್ಸವನ್ನು ವಿಜೃಂಭಣೆಯಿಂದ ಮಾಡಿದರು. ಗ್ರಾಮದ ಎಲ್ಲಾಜನರು ತಮ್ಮ ತಮ್ಮ ಬೇಡಿಕೆಗಳ್ಳನ್ನು ಈಡೇರಿಸಿದರು. ವಿಶೇಷ ಹಾರಗಳು, ಡೊಳ್ಳು, ನಗಾರಿ ಭಾರಿಸುತ್ತ ದೇವಿ ಗುಡಿಗೆ ಮೆರವಣಿಗೆ ಹೊರಟರು. ಸಂಜೆ ದೈವನಂಬಿಕೆ ಜೊತೆಗೆ ಕುರಿ ಕಡಿದು ಸಂಭ್ರಮಿಸುತ್ತಾರೆ. ಇಲ್ಲಿಯ ಜನರು ಗ್ರಾಮ ದೇವತೆಯೂ ಊರನ್ನು ಕಾಪಾಡುತ್ತಾಳೆ ಎಂದು ನಂಬುತ್ತಾರೆ. ಓಣಿಯ ಎಲ್ಲಾ ದೇವಸ್ಥಾನಗಳಿಗೂ ಹಣ್ಣು ಕಾಯಿ ನೀಡುತ್ತಾರೆ. ಜಾತ್ರಾ ಮಹೋತ್ಸವದಲ್ಲಿ ಹಿರಿಯರು, ಕಿರಿಯರು, ಯುವಕರು, ಯುವತಿಯರು, …

Read More »

ಹುಬ್ಬಳ್ಳಿ:ಡಾ.ಪುನೀತ್ ರಾಜಕುಮಾರ್ ಹುಟ್ಟು ಹಬ್ಬದ ಸಂಭ್ರಮಾಚರಣೆ.

ಹುಬ್ಬಳ್ಳಿ ನಗರದ ಚೆನ್ನಮ್ಮ ವೃತ್ತದ ಹಳೆ ಬಸ್ಟ್ಯಾಂಡ್ ನಲ್ಲಿ ಪುನೀತ್ ರಾಜಕುಮಾರ್ ಹುಟ್ಟು ಹಬ್ಬದ ಆಚರಣೆಯನ್ನು ಅಭಿಮಾನಿಗಳು ವಿಜೃಂಭಣೆಯಿಂದ ಸಂಭ್ರಮಿಸಿದ್ದಾರೆ. ಪುನೀತ್ ರಾಜಕುಮಾರ್ ಅವರ ಕಟೌಟ್ ಗೆ ಹಾರ ಹಾಕಿ ಪಟಾಕಿ ಸಿಡಿಸಿ ಸಂಭ್ರಮ ಪಟ್ಟಿದ್ದಾರೆ. ಕರುನಾಡ ರತ್ನ,ನಟಸಾರ್ವಭೌಮ ಪುನೀತ್ ರಾಜಕುಮಾರ್ ಎಂದೆಂದಿಗೂ ಅಮರ.

Read More »

ಬೆಂಗಳೂರು ಮೆಟ್ರೋದಲ್ಲಿ ಉದ್ಯೋಗ.ಆಸಕ್ತರು ಹೀಗೆ ಅಪ್ಲಯ್ ಮಾಡಿ.

ಬೆಂಗಳೂರಿನಲ್ಲೇ ಉದ್ಯೋಗ ಹುಡುಕುತ್ತಿರುವವರಿಗೆ ಇಲ್ಲೊಂದು ಸುವರ್ಣ ಅವಕಾಶ ಇದೆ.ಬೆಂಗಳೂರು ಮೆಟ್ರೋ ರೈಲು ನಿಗಮದಲ್ಲಿ ರೈಲು ಆಪರೇಟರ್ ಹುದ್ದೆಗಳು ಖಾಲಿ ಇವೆ. ಅರ್ಜಿ ಸಲ್ಲಿಕೆಗೆ ಮುಂದಿನ ತಿಂಗಳು ಏಪ್ರಿಲ್ 04 ಕೊನೆ ದಿನವೆಂದು ನಿಗದಿಪಡಿಸಲಾಗಿದೆ. ಹುದ್ದೆಗಳು: 50 ಹುದ್ದೆಗಳ ಹೆಸರು ರೈಲು ಆಪರೇಟರ್ ಅರ್ಜಿ ಸಲ್ಲಿಕೆ ವಿಧಾನ ಆಫ್‌ಲೈನ್.ಅರ್ಜಿ ಸಲ್ಲಿಸುವ ವಿಳಾಸ ಜನರಲ್ ಮ್ಯಾನೇಜರ್ (HR), ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್, III ಮಹಡಿ, BMTC ಕಾಂಪ್ಲೆಕ್ಸ್, ಕೆ.ಎಚ್. ​​ರಸ್ತೆ, …

Read More »

ಸ್ಯಾಂಡಲ್ ವುಡ್ ಸಂಭ್ರಮ:ಮೊಮ್ಮಗನಿಗೆ ಹೆಸರಿಟ್ಟ ಸುಮಲತಾ ಅಂಬರೀಶ್.

ಸುಮಲತಾ ಅಂಬರೀಶ್ ಮೊಮ್ಮಗ, ನಟ ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಬಿದ್ದಪ್ಪ ಅವರ ಮಗನ ನಾಮಕರಣ ಇಂದು ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಅದ್ಧೂರಿಯಾಗಿ ನೆರವೇರಿದೆ. ರಾಜಕೀಯ ಮತ್ತು ಚಿತ್ರರಂಗದ ಹಲವು ಗಣ್ಯರು ಈ ನಾಮಕರಣ ಮಹೋತ್ಸವದಲ್ಲಿ ಭಾಗಿ ಆಗಿದ್ದರು.ಮಗನಿಗೆ ರಾಣಾ ಅಮರ್ ಅಂಬರೀಶ್ ಎಂದು ಹೆಸರಿಡಲಾಗಿದೆ. ಪವರ್​ಫುಲ್ ಹೆಸರನ್ನೇ ಮಗನಿಗೆ ಆಯ್ಕೆ ಮಾಡಿದ್ದಾರೆ ದಂಪತಿ. ಇದರಲ್ಲಿ ಅಮರ್ ಎಂಬುದು ಅಂಬರೀಶ್ ಅವರ ಹೆಸರು. ಅಂಬರೀಶ್ ಅವರ ಮೂಲ ಹೆಸರು ಅಮರ್​ನಾಥ್. …

Read More »

ಡಾಕ್ಟರ್ ಪುನೀತ್ ರಾಜ್ ಕುಮಾರ್ ಅವರ ಹುಟ್ಟು ಹಬ್ಬಕ್ಕೆ ಮೊದಲ ಪಿಚ್ಚರ್ ರಿಲೀಸ್ ಕರ್ನಾಟಕ ರತ್ನ ” ಅಪ್ಪು “

ಪುನೀತ್ ಐವತ್ತು ವರ್ಷದ ಹುಟ್ಟು ಹಬ್ಬದ ಹಿನ್ನೆಲೆ ಅಪ್ಪು ಪಿಚ್ಚರ್ ರಿಲೀಸ್ 23 ವರ್ಷಗಳ ಬಳಿಕ ಅಪ್ಪು ರಿ ರಿಲೀಸ್. ಬೆಂಗಳೂರಿನ ವೀರೇಶ್ ಥಿಯೇಟರ್ನಲ್ಲಿಕಟೌಟ್ ಗೆ ಹಾರ, ಅಭಿಷೇಕ್,ಪಟಾಕಿ ಹೊಡೆದು ಅಭಿಮಾನಿಗಳಿಂದ ಸಂಭ್ರಮ. ಹೌಸ್ ಫುಲ್ ಆದ ಥಿಯೇಟರ್ ಅಭಿಮಾನಗಳಲ್ಲಿ ನಿಲ್ಲದ ಕ್ರೇಸ್ ಥಿಯೇಟರ್ ಹೌಸ್ ಫುಲ್ ಆಗಿದೆ

Read More »

ಅಪ್ಪು ಹುಟ್ಟುಹಬ್ಬ ಹಾಗೂ ಟ್ರೋಫಿ ಗೆದ್ದ ಹಿನ್ನೆಲೆ ಉಚಿತ ಚಾಟ್ಸ್ ನೀಡುತ್ತಿರುವ ಅಭಿಮಾನಿ.

ಪುನೀತ್ ರಾಜ್ ಕುಮಾರ್ 50 ನೇ ಹುಟ್ಟುಹಬ್ಬ ಪ್ರಯುಕ್ತ ಹಾಗೂ ಇಂಡಿಯಾ ICC ಚಾಂಪಿಯನ್ಸ್ ಟ್ರೋಫಿ ಗೆದ್ದ ಹಿನ್ನೆಲೆ ಪುನೀತ್ ಅಭಿಮಾನಿಯಿಂದ ಉಚಿತ ಚಾಟ್ಸ್ ವಿತರಣೆ ಮಾಡುತ್ತಿದ್ದಾರೆ. ಅನಿಲ್ ಚಾಟ್ಸ್ ಸೆಂಟರ್ ನಿಂದ ಹುಟ್ಟುಹಬ್ಬ ಹಾಗೂ ಟ್ರೋಫಿ ಗೆದ್ದ ಕಾರಣ ಉಚಿತ ಚಾಟ್ಸ್ ವಿತರಣೆಗೆ ಮುಂದಾಗಿದ್ದಾರೆ.ಮಹಾಲಕ್ಷ್ಮಿ ಲೇಔಟ್ ನಲ್ಲಿರುವ ಅನಿಲ್ ಚಾಟ್ಸ್ ಸೆಂಟರ್ ನಲ್ಲಿ ಅಭಿಮಾನಿ ಮಾರ್ಚ್ 17 ರಂದು ಸಂಜೆ 5 ರಿಂದ ಚಾಟ್ಸ್ ವಿತರಣೆ ಮಾಡಲಾಗುತ್ತದೆ ಎಂದು …

Read More »