ಹುಬ್ಬಳ್ಳಿ : ಯುವಕನೊಬ್ಬನ ಮೇಲೆ ನಾಲೈದು ಪುಡಿ ರೌಡಿಗಳ ಗುಂಪು ಶೆಡ್’ಕರೆದೊಯ್ದು ರಾಡ್ ನಿಂದ ಮನಸೋ ಇಚ್ಛೆ ಹಲ್ಲೆ ನಡೆಸಿದ ಪರಿಣಾಮ ಯುವಕನ ಕೈ ಕಾಲು ಮುರಿದು ಕಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿರುವ ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಹಲ್ಲೆಗೊಳಗಾದ ಯುವಕನ ವಿನಾಯಕ ಅಂತಾ ತಿಳಿದು ಬಂದಿದ್ದು ಈತ ಅಭಿಷೇಕ ಸಿದ್ದಾಪುರ ಎಂಬಾತನ ಬಳಿಯಲ್ಲಿ 5000 ಸಾವಿರ ಸಾಲವನ್ನು ಮಾಡಿದ್ದ,ಆದ್ರೆ ಕಳೆದ ಎರಡು ತಿಂಗಳುಗಳಿಂದ ಸಾಲವನ್ನು ಕೊಟ್ಟಿರಲಿಲ್ಲ. ಹೀಗಾಗಿ ಇಂದು ಬೆಳ್ಳಿಗ್ಗೆ ತಾಯಿಗೆ ಔಷಧಿ ತರಲು ಹೋಗಿದ್ದ ವಿನಾಯಕನನ್ನು ಏಕಾಏಕಿ ಬಂದ ನಾಲೈದು ಯುವಕರು ಶೆಡ್’ಒಂದಕ್ಕೆ ಕರೆದೊಯ್ದು ರಾಡ್ ನಿಂದ ಮಾರಣಾಂತಿಕ ಹಲ್ಲೆ ನಡೆಸಿದ ಪರಿಣಾಮ ವಿನಾಯಕನ ಒಂದು ಕೈ ಸಂಪೂರ್ಣವಾಗಿ ಸ್ವಾದೀನ್ ಕಳೆದುಕೊಂಡಿದೆ.
ಇಷ್ಟಕ್ಕೆ ಸುಮ್ಮನಾಗದ ಈ ಪುಂಡರು ವಿನಾಯಕನ ಮನೆಗೆ ನುಗ್ಗಿ ಮನೆಯಲ್ಲಿದ್ದ ಮಹಿಳೆಯರಿಗೆ ಆವಾಜ್ ಹಾಕಿದ್ದಾರೆ,ನಿಮ್ಮನ್ನು ಸುಮ್ಮನೆ ಬಿಡಲ್ಲ ರೇಪ್ ಮಾಡ್ತೀವಿ ಅಂತಾ ಧಮ್ಮಿ ಹಾಕಿದ್ದಾರೆ,ನೀವು ಈ ಊರು ಖಾಲಿ ಮಾಡಿ ಹೋಗಬೇಕು ಅಂತಾ ಬೆದರಿಕೆಯನ್ನು ಹಾಕ್ತಿದ್ದಾರೆ .
bigtvnews | Hubli Dharwad News | Kannada News | Karnataka News Hubli News | News In Hubli | Local news

