ಧಾರವಾಡ: ಇಡೀ ರಾಜ್ಯದ ಜನತೆಗೆ ಆಘಾತ ಕೊಡುವ ಬೆಳವಣಿಗೆಯೊಂದು ನಡೆಯುತ್ತಿದೆ. ನಮ್ಮ ಧಾರವಾಡ ಜಿಲ್ಲೆಯಲ್ಲೇ 500 ಎಕರೆ ಆಸ್ತಿ ವಕ್ಷಗೆ ಒಳಪಟ್ಟಿದೆ ಎಂಬ ಮಾಹಿತಿ ಇದೆ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಹೇಳಿದರು.
ಧಾರವಾಡದಲ್ಲಿ ಮಾತನಾಡಿದ ಅವರು, ಉಪ್ಪಿನ ಬೆಟಗೇರಿ ಗ್ರಾಮದ ಕೆಲ ರೈತರ ಜಮೀನಿನ ಪಹಣಿಯಲ್ಲೂ ವಕ್ಷ ಆಸ್ತಿ ಎಂದು ನಮೂದಾಗಿದೆ. ಧಾರವಾಡದ ಸ್ಮಶಾನ ಕೂಡ 1995 ರಲ್ಲಿ ವಕ್ಷ ಆ್ಯಕ್ಟ್ ಮಾಡಿದ್ದ ವೇಳೆ ಅದನ್ನು ವಕ್ಷ ಆಸ್ತಿ ಮಾಡಿಕೊಳ್ಳಲಾಗಿದೆ. ಅಲ್ಲಿ ಎಸ್ಸಿ, ಎಸ್ಟಿ ಅವರಿಗೆ ಜಾಗ ಕೂಡ ಕಡಿಮೆಯಾಗಿದೆ ಎಂದರು.
ಆಳಂದದಲ್ಲಿ ಕುರುಬ ಸಮಾಜದ ಬೀರೇಶ್ವರ ದೇವಸ್ಥಾನ ವಕ್ಷ ಆಸ್ತಿಗೆ ಸೇರಿದೆ ಎಂದು ಬರೆದುಕೊಂಡಿದ್ದಾರೆ. ಸಿದ್ದರಾಮಯ್ಯನವರು ಕುರುಬ ಸಮಾಜದವರೇ ಆಗಿದ್ದು, ಅವರು ಇದಕ್ಕೆ ಉತ್ತರ ಕೊಡಬೇಕು. ಕೇವಲ ಮುಸ್ಲಿಂ ಸಮಾಜಕ್ಕೆ ಬದ್ಧತೆ ತೋರಿಸಿದರೆ ನಡೆಯುವುದಿಲ್ಲ. ಸಿದ್ದರಾಮಯ್ಯ ಹಾಲುಮತದವರು ಅವರ ಸಮಾಜದ ದೇವರ ಜಾಗವನ್ನೇ ವಕ್ಷಗೆ ಸೇರಿಸಿದ್ದಾರೆ. ಇದರ ಬಗ್ಗೆ ಜನ ಜಾಗೃತಿ ಆಗುವ ಅವಶ್ಯಕತೆ ಇದೆ. ಇದು ಆಗಲಿಲ್ಲ ಎಂದರೆ ಭೂಮಿ ಹೊಡೆಯುವ ಕೆಲಸ ಆಗಲಿದೆ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

