ಹುಬ್ಬಳ್ಳಿ: ಸಿದ್ದರಾಮಯ್ಯ ಭಾಷಣ ಶುರುವಾಗೋದೆ ನುಡಿದಂತೆ ನಡೆದಿದ್ದೇವೆ ಎಂದು ಹೇಳ್ತಾರೆ. ಏನು ನುಡಿದಂತೆ ನಡೆದಿದ್ದೀರಿ! ಎಲ್ಲ ವಸ್ತುಗಳ ದರ ಜಾಸ್ತಿಯಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿ ಕಾರಿದರು.
ಹುಬ್ಬಳ್ಳಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಅನೇಕ ಕಡೆ ಬಸ್ ಇಲ್ಲ. ಶಾಲಾ ಮಕ್ಕಳಿಗೆ ಬಸ್ ಇಲ್ಲದೆ ಅವರ ಬವಣೆ ಹೇಳತೀರದು. ಫ್ರೀ ಅಂತ ಹೇಳಿ ವೋಟ್ ತೆಗೆದುಕೊಂಡಿದ್ದಾರೆ. ಯಾವುದೇ ಪ್ಲಾನ್ ಇಲ್ಲದೆ ಫ್ರೀ ಕೊಟ್ಟಿದ್ದಾರೆ. ವಿದ್ಯುತ್ ದರ ಹೆಚ್ಚಳ ಮಾಡಿದ್ದಾರೆ. ಪೆಟ್ರೋಲ್, ಡಿಸೇಲ್ ಮೇಲಿನ ದರವನ್ನೂ ಹೆಚ್ಚಳ ಮಾಡಿದ್ದಾರೆ. ಅನೇಕ ರಾಜ್ಯಗಳಲ್ಲಿ ಕಡಿಮೆ ಆಗಿದೆ. ಕರ್ನಾಟಕದಲ್ಲಿ ಜಾಸ್ತಿ ಆಗಿದೆ. ಬಾಂಡ್ ಪೇಪರ್ ದರ ಹೆಚ್ಚಾಗಿದೆ. ಹಾಲು- ಆಲೋಹಾಲ್ ಬೆಲೆ ಜಾಸ್ತಿಯಾಗಿದೆ. ಏನು ಮಾಡ್ತಿದ್ದಾರೆ ಇವರು ಎಂದು ಜೋಶಿ ಹರಿಹಾಯ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

