ರಾಯಚೂರು: ರಾಯಚೂರಿನ ವಾರ್ಡ್ ನಂ 5 ರ ಡ್ಯಾಡಿ ಕಾಲೋನಿಗೆ ಹೊಂದಿಕೊಂಡಿರುವ ಕೆಇಬಿ ಕ್ವಾಟ್ರಸ್ ಕಾಂಪೌಂಡ ಗೋಡೆ ನಿರ್ಮಾಣ ಹಾಗೂ ಲಿಂಗಸ್ಗೂರು ರಾಯಚೂರು ಮುಖ್ಯ ರಸ್ತೆಯ ಚೈತನ್ಯ ಆಸ್ಪತ್ರೆಯಿಂದ ಯಕ್ಲಾಸ್ ಪೂರ ಮುಖ್ಯ ರಸ್ತೆಯವರೆಗೆ ಸಂಪರ್ಕಿಸುವ ರಸ್ತೆ ಕಾಮಗಾರಿಗಳನ್ನು ಕಾಂಗ್ರೆಸ್ ರಾಜ್ಯ ಸಂಚಾಲಕರಾದ ರವಿ ಬೋಸರಾಜು ಅವರು ವೀಕ್ಷಿಸಿದರು.
ಯಕ್ಲಾಸ್ ಪುರ ಗ್ರಾಮದಿಂದ ಚೈತನ್ಯ ಆಸ್ಪತ್ರೆ ಮೂಲಕ ರಾಯಚೂರು ಲಿಂಗಸೂರು ರಸ್ತೆ ಸಂಪರ್ಕಿಸುವ ಈ ರಸ್ತೆ ಹೆಚ್ಚಿನ ಜನ ಸಂಪರ್ಕ ಹೊಂದೊರುವದರಿಂದ ಆದಷ್ಟು ಬೇಗ ತ್ವರಿತಗತಿಯಲ್ಲಿ ಕಾಮಗಾರಿಯನ್ನು ಮುಗಿಸಿ ರಾಯಚೂರಿನ ಜನರಿಗೆ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕೆಂದು ಅಧಿಕಾರಿಗಳೊಂದಿಗೆ ಮಾತನಾಡಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರು ಹಿರಿಯರಾದ ಜಯಣ್ಣ, ನರಸಿಂಹಲು ಮಾಡಗಿರಿ, ತಾಲೂಕ ಪಂಚಾಯತ್ ಮಾಜಿ ಅಧ್ಯಕ್ಷರಾದ ದಾನನ ಗೌಡ, ಜಿಲ್ಲಾ ಯುವ ಕಾಂಗ್ರೆಸ್ ಅದ್ಯಕ್ಷರಾದ ಅರುಣ ದೋತರಬಂಡಿ, ಮಹೇಶ ಪಾಟೀಲ್, ಬಸವರಾಜ, ವಿನೋದ್, ನಿರ್ಮಿತಿ ಕೇಂದ್ರದ ಗಣಪತಿ ಸಾಕ್ರೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

