ಇತ್ತೀಚಿಗೆ ತಣ್ಣಗಾದ ಹಳೆ ಹುಬ್ಬಳ್ಳಿ ಗಲಭೆ ಪ್ರಕರಣಗಳ ಮಧ್ಯೆ ಇದೀಗ ಒಂದಿಷ್ಟು ಸ್ಥಳೀಯ ಯುವಕರಿಂದ ಹೊಡೆದಾಟದ ಪ್ರಕರಣವು ಬೆಳಕಿಗೆ ಬಂದಿದೆ. ಮಾರ್ಚ್ ಐದರಂದು ಸುಮಾರು ರಾತ್ರಿ 11:30ಕ್ಕೆ ತಿಮ್ಮಸಾಗರ ರೋಡ್ ಐ.ಟಿ.ಐ ಕಾಲೇಜ್ ಹತ್ತಿರ ಕಾಲೇಜು ಯುವಕರು ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಹೊಡೆದಾಡಿಕೊಂಡಿದ್ದಾರೆ. ಈ ಪ್ರಕರಣವು

ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು ಎಂಟು ಜನ ಆರೋಪಿಗಳನ್ನು ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಆರೋಪಿತರಾದ ದೀಪಕ್ ಪೂಜಾರ್,ರಾಘವೇಂದ್ರ ಪೂಜಾರ್, ಅಮರ್ ಪೂಜಾರ್, ಶಂಕರ್ ಜಿತೂರಿ, ವಿಘ್ನೇಶ್ ಕೆಸರ್ ಕರ್, ಸಚಿನ್ ಹನುಮನಹಳ್ಳಿ, ಕುಶಾಲ್ ಬೆಳಂಕರ್, ಸಾಗರ್ ಲಕ್ಕುಂಡಿ ಈ ಎಲ್ಲಾ ಆರೋಪಿಗಳು ತಿಮ್ಮಸಾಗರ್ ರೋಡ್ ಹಳೆ ಹುಬ್ಬಳ್ಳಿಯ ನಿವಾಸಿಗಳಾಗಿರುತ್ತಾರೆ. ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಹಳೆ ಹುಬ್ಬಳ್ಳಿಯ ಪೋಲಿಸ್ ಇನ್ಸ್ಪೆಕ್ಟರ್ ಸಬ್ ಇನ್ಸ್ಪೆಕ್ಟರ್ ಬಿ.ಎನ್. ಸಾತಣ್ಣನವರ್ ಹಾಗೂ ಸಿಬ್ಬಂದಿಗಳನ್ನು ಮಾನ್ಯ ಪೋಲಿಸ್ ಆಯುಕ್ತಕರು ಅಭಿನಂದಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

