ಚಿತ್ರದುರ್ಗದ ಕೆಳಗಳಹಟ್ಟಿ ಗ್ರಾಮದ ಓಬಣ್ಣ ಹಾಗೂ ದೀಪಾ ಎಂಬ ದಂಪತಿಯ ಪುತ್ರ ಈ ಅನಾಹುತದಲ್ಲಿ ಬಲಿಯಾಗಿದ್ದಾನೆ. ದೀಪಾ ತನ್ನ ಪುತ್ರನೊಂದಿಗೆ ತವರಿಗೆ ಬಂದಿದ್ದರು.ಈ ವೇಳೆ ದೀಪಾ ಅವರು ತನ್ನ ತಂದೆ ಮಾರಣ್ಣ ಜೊತೆ ಮಗನನ್ನು ಹೊಲಕ್ಕೆ ಟ್ರ್ಯಾಕ್ಟರ್ನಲ್ಲಿ ಕರೆದುಕೊಂಡು ಹೋಗಿದ್ದರು. ತಾತನೊಂದಿಗೆ ಕುಳಿತಿದ್ದ ಬಾಲಕ ಮಾರ್ಗಮಧ್ಯೆ ಆಯತಪ್ಪಿ ಬಿದ್ದು ಟ್ರ್ಯಾಕ್ಟರ್ನ ರೂಟರ್ ಯಂತ್ರಕ್ಕೆ ಸಿಲುಕಿದಾಗ ದೇಹ ತುಂಡಾಗಿದೆ. ಗುಡೇಕೋಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
