ಎಂಜಿನಿಯರ್ ಮಂಜುನಾಥ್ ಎಂಬುವವರು ಆಫ್ರಿಕಾದ ನೈಜೀರಿಯಾದಲ್ಲಿ ಸತತ 31 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಬಳಿಕ ವಾಪಸ್ ಬೆಂಗಳೂರಿಗೆ ಬಂದು ಪತ್ನಿ ಜೊತೆ ಬಿಟಿಎಂ ಲೇಔಟ್ನಲ್ಲಿ ನೆಲೆಸಿದ್ದಾರೆ. ಇವರಿಗೆ ಕಳೆದ ಮಾರ್ಚ್ನಲ್ಲಿ ಬ್ಯಾಂಕ್ ಪ್ರತಿನಿಧಿ ಸೋಗಿನಲ್ಲಿ ಕರೆ ಮಾಡಿದ ವಂಚಕರು ನಿಮ ಕ್ರೇಡಿಟ್ ಕಾರ್ಡ್ ಲಿಮಿಟ್್ಸ ಓವರ್ ಡ್ಯೂ ಆಗಿದೆ ಎಂದು ನಂಬಿಸಿ ಅವರ ಬ್ಯಾಂಕ್ನ ವಿವರಗಳನ್ನು ಪಡೆದುಕೊಂಡಿದ್ದಾರೆ.ತದ ನಂತರ ನಿಮ ಖಾತೆಯ ಮೂಲಕ ಅಕ್ರಮವಾಗಿ ಹಣ ವರ್ಗಾವಣೆಯಾಗಿದೆ, ನಿಮ ವಿರುದ್ಧ ಇಡಿ ಮತ್ತು ಸಿಬಿಐನಲ್ಲಿ ಪ್ರಕರಣ ದಾಖಲಾಗಿದೆ ಎಂದು ಹೇಳಿ ನಕಲಿ ವಾರೆಂಟ್ನ ಫೋಟೋ ಕಳುಹಿಸಿ ನಿಮನ್ನು ಬಂಧಿಸಿ ತಿಹಾರ್ ಜೈಲಿನಲ್ಲಿರಿಸುತ್ತೇವೆಂದು ಹೆದರಿಸಿ ಹಂತ ಹಂತವಾಗಿ ಬರೋಬ್ಬರಿ 4.79 ಕೋಟಿ ರೂ. ಹಣವನ್ನು ಸುಲಿಗೆ ಮಾಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

