ಐದು ಹುಲಿಗಳ ಸಾವಿನ ಪ್ರಕರಣದಲ್ಲಿ ಮೂವರನ್ನು ಅರಣ್ಯ ಇಲಾಖೆ ದಸ್ತಗಿರಿ ಮಾಡಿದ್ದಾರೆ. ವಿಷ ಪ್ರಾಶನ ಮಾಡಿದ್ದ ಹಸುವಿನ ಮಾಲೀಕನೂ ಪತ್ತೆಯಾಗಿದ್ದಾನೆ. ಕೊಪ್ಪ ಗ್ರಾಮದ ಕೂನಪ್ಪ, ಮಾದರಾಜ, ನಾಗರಾಜ ಬಂಧಿತರಾಗಿದ್ದಾರೆಂದು ಅರಣ್ಯ ಇಲಾಖೆ ಅಧಿಕೃತವಾಗಿ ಧೃಡಪಡಿಸಿದೆ.ಅರಣ್ಯದೊಳಗೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಹಸು ಸಮೀಪದ ಕೊಪ್ಪ ಗ್ರಾಮದ ಕೋನಪ್ಪ , ಹಸುವಿಗೆ ವಿಷ ಪ್ರಷಾಣ ಮಾಡಿಸಿದ ಮಾದರಾಜ ಬಿನ್ ಶಿವಣ್ಣಗೌಡ ಕೊಪ್ಪ ಗ್ರಾಮ, ಹಾಗೂ ನಾಗರಾಜ ಬಿನ್ ಪೂಜಾರಿಗೌಡ ಕಳ್ಗೋಬೆದೊಡ್ಡಿ (ಕೊಪ್ಪ ಗ್ರಾಮ ಸಮೀಪ) ರವರನ್ನು ಪೊಲೀಸರ ಸಹಕಾರದೊಂದಿಗೆ ಬಂಧಿಸಲಾಗಿದೆ.ಅರಣ್ಯಾಧಿಕಾರಿಗಳು ಬಂಧಿತ ಆರೋಪಿಗಳನ್ನು ಮತ್ತಷ್ಟು ವಿಚಾರಣೆಗೆ ಒಳಪಡಿಸಿದ್ದು, ಎನ್ ಟಿ ಸಿ ಎ ಮತ್ತು ತನಿಖಾ ತಂಡದವರಿಂದ ತೀವ್ರತರವಾದ ವಿಚಾರಣೆಗೆ ಒಳಪಡಿಸಲಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

