ಡಿಕ್ಕಿ ಹೊಡೆದ ಎರಡು ಲಾರಿಗಳ ನಡುವೆ ಕಾರು ಸಿಕ್ಕಿಕೊಂಡು ನಜ್ಜುಗುಜ್ಜಾದ ಪರಿಣಾಮ 8 ಮಂದಿ ಮೃತಪಟ್ಟು, 15 ಮಂದಿ ಗಾಯಗೊಂಡ ಘಟನೆ ಮಹಾರಾಷ್ಟ್ರದ ಪುನಾದಲ್ಲಿ ಸಂಭವಿಸಿದೆ.ಗುರುವಾರ ಸಂಜೆ ನಾವಲೆ ಸೇತುವೆ ಬಳಿ ದುರಂತ ಸಂಭವಿಸಿದ್ದು, ಡಿಕ್ಕಿ ಹೊಡೆದ ಪರಿಣಾಮ ಲಾರಿಯೊಂದು ಬೆಂಕಿ ಹೊತ್ತಿಕೊಂಡು ಉರಿದಿದೆ.ಘಟನೆಯ ಮಾಹಿತಿ ಲಭಿಸುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಪ್ರಯತ್ನ ಮಾಡಿತು. ಆದರೆ ಅಷ್ಟರಲ್ಲಿ ಲಾರಿಗಳ ಮಧ್ಯೆ ಸಿಲುಕಿದ್ದ ಕಾರಿನಲ್ಲಿದ್ದವರು ಬೆಂಕಿಯ ಕೆನ್ನಾಲಿಗೆ ಬೆಂದು ಹೋಗಿದ್ದರು. ಅಪಘಾತದಿಂದ ವಾಹನ ದಟ್ಟಣೆ ಉಂಟಾಗಿದ್ದು, ಗಾಯಗೊಂಡವರನ್ಮು ಆಸ್ಪತ್ರೆಗೆ ಸಾಗಿಸಲು ಕೂಡ ಅಧಿಕಾರಿಗಳು ಪರದಾಡುವಂತಾಯಿತು.
bigtvnews | Hubli Dharwad News | Kannada News | Karnataka News Hubli News | News In Hubli | Local news

