Breaking News

ʼದ್ರೋಹಕ್ಕೆ ಶಿಕ್ಷೆ ಸಾವುʼ – ಪತ್ನಿ ಕೊಲೆಗೈದು ಸೆಲ್ಫಿ ಫೋಟೋ ಹಂಚಿಕೊಂಡ ಪತಿ.!

ಅಕ್ರಮ ಸಂಬಂಧ ಶಂಕಿಸಿ ಪತಿಯೊಬ್ಬ ಪತ್ನಿಯ ಪ್ರಾಣ ತೆಗೆದಿರುವ ಘಟನೆ ಕೊಯಮತ್ತೂರುನಲ್ಲಿ ನಡೆದಿರುವುದು ವರದಿಯಾಗಿದೆ. ಬಾಲಮುರುಗನ್‌ಗೆ ಪತ್ನಿ ಶ್ರೀಪ್ರಿಯಾಳ ಬೇರೊಬ್ಬರ ಜತೆ ಸಂಬಂಧ ಇಟ್ಟುಕೊಂಡಿದ್ದಾಳೆ ಎನ್ನುವ ಸಂಶಯ ಬಂದಿದೆ. ಈ ಕಾರಣದಿಂದ ಇತ್ತೀಚೆಗೆ ಪತಿ ಬಾಲಮುರುಗನ್‌ ಪತ್ನಿ ಕೆಲಸ ಮಾಡುತ್ತಿರುವ ಹಾಸ್ಟೆಲ್‌ಗೆ ಭೇಟಿ ನೀಡಿದ್ದಾನೆ. ಹೊರಗೆ ಬರುವಂತೆ ಪತ್ನಿಗೆ ಹೇಳಿದ್ದಾನೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.ಬಾಲಮುರುಗನ್‌ ಮೃತದೇಹದ ಬಳಿಯೇ ಕೂತಿದ್ದು, ಸೆಲ್ಫಿ ತೆಗೆದುಕೊಂಡಿದ್ದಾನೆ, “ದ್ರೋಹಕ್ಕೆ ಶಿಕ್ಷೆ ಸಾವು” ಎಂದು ಬರೆದುಕೊಂಡು ಫೋಟೋಗಳನ್ನು ಅಪ್ಲೋಡ್‌ ಮಾಡಿದ್ದಾನೆ.

ಪೊಲೀಸರು ಬರುವವರೆಗೂ ಬಾಲಮುರುಗನ್‌ ಕೃತ್ಯ ನಡೆದ ಸ್ಥಳದಲ್ಲೇ ಕೂತಿದ್ದಾನೆ. ರತ್ನಪುರಿ ಪೊಲೀಸರು ಬಾಲಮುರುಗನ್ ಅವರನ್ನು ಬಂಧಿಸಿ ಪ್ರಕರಣದ ತನಿಖೆ ಆರಂಭಿಸಿದ್ದಾರೆ.

Share News

About BigTv News

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *