Breaking News

ಜಮೀನು ಪೋಡಿ ಹೆಸರಿನಲ್ಲಿ ಲಂಚಕ್ಕೆ ಬೇಡಿಕೆ: ‘ಲೋಕಾ’ ಬಲೆಗೆ ಬಿದ್ದ ಸರ್ವೇಯರ್

ಮೈಸೂರು:- ಜಿಲ್ಲೆಯಲ್ಲಿ ಲೋಕಾಯುಕ್ತ ತಂಡವು ಪಿರಿಯಾಪಟ್ಟಣ ಕಂದಾಯ ಇಲಾಖೆಯ ಸರ್ವೇಯರ್ ರವೀಂದ್ರ ಅವರನ್ನು ಲಂಚ ಸ್ವೀಕಾರ ಪ್ರಕರಣದಲ್ಲಿ ಬಲೆಗೆ ಬೀಳಿಸಿದೆ.ಜಮೀನಿನ ಪೋಡಿ ದುರಸ್ತಿ ಮತ್ತು ಸಾಗುವಳಿ ಹೆಸರಿನಲ್ಲಿ, “ನಿಮ್ಮ ಜಮೀನು ರಸ್ತೆಗೊಳಪಡುವ ಸಾಧ್ಯತೆ ಇದೆ” ಎಂದು ಹೆದರಿಸಿ 1 ಲಕ್ಷ ರೂ.ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪ ಇದೆ. ಲೋಕಾಯುಕ್ತ ತಂಡವು ಜಾಲ ಹಚ್ಚಿದಾಗ, 30 ಸಾವಿರ ರೂ. ಸ್ವೀಕರಿಸುವ ವೇಳೆ ರವೀಂದ್ರನನ್ನು ಹಿಡಿದಿದೆ. ಈ ಕಾರ್ಯಾಚರಣೆ ಲೋಕಾಯುಕ್ತ ಎಸ್‌ಪಿ ಟಿ.ಜೆ. ಉದೇಶ್ ಅವರ ಮಾರ್ಗದರ್ಶನದಲ್ಲಿ ನಡೆದಿದೆ. ಹುಣಸೂರು ಪ್ರದೇಶದ ಒಂದು ಬಾರ್‌ನಲ್ಲಿ ಹಣ ತೆಗೆಯುತ್ತಿದ್ದ ಸಮಯದಲ್ಲಿ ರವೀಂದ್ರ ಬಲೆಗೆ ಬೀಳಿದ್ದಾರೆ.

Share News

About BigTv News

Check Also

ಅಡಿಕೆ ತೋಟಕ್ಕೆ ನೀರು ಹಾಯಿಸುವ ವಿಚಾರಕ್ಕೆ ಜಗಳ; ಚಿಕ್ಕಪ್ಪನಿಗೆ ಚಾಕು ಇರಿತ!

ಶಿವಮೊಗ್ಗ ತಾಲೂಕಿನ ಪುರದಾಳು ಗ್ರಾಮದಲ್ಲಿ ಜಮೀನಿನ ಗಡಿ ಹಾಗೂ ಅಡಿಕೆ ತೋಟಕ್ಕೆ ನೀರು ಹಾಯಿಸುವ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಯುವಕನೊಬ್ಬ …

Leave a Reply

Your email address will not be published. Required fields are marked *