Breaking News

ತುಂಗಾ ನದಿಯ ಚಕ್ರತೀರ್ಥದ ಸಮೀಪ ಈಜಲು ತೆರಳಿದ್ದ ಯುವ ಸಾವು

ತೀರ್ಥಹಳ್ಳಿ: ರಾಮೇಶ್ವರ ದೇವಸ್ಥಾನದ ಹಿಂಭಾಗದ ತುಂಗಾ ನದಿಯ ಚಕ್ರತೀರ್ಥದ ಸಮೀಪ ನೀರಿನಲ್ಲಿ ಈಜಲು ತೆರಳಿದ್ದ ಮಹಾರಾಷ್ಟ್ರದ ಯುವಕ ಮೃತಪಟ್ಟಿದ್ದಾನೆ.ಮೃತ ಯುವಕನನ್ನು ವಿಕಾಸ್ ಬೋಸ್ಥೆ (18) ಎಂದು ಗುರುತಿಸಲಾಗಿದೆ. ಎಳ್ಳಮಾಸ್ಯೆ ಜಾತ್ರೆ ಇದ್ದಿದ್ದರಿಂದ ಅಂಗಡಿ ಹಾಕಲು ಬಂದಿದ್ದ ಯುವಕ ಮಧ್ಯಾಹ್ನ ಈಜಲು ತೆರಳಿದ್ದ.ಈ ವೇಳೇ ನೀರಿನ ಸೆಳೆತ ಹೆಚ್ಚಾಗಿ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಅಗ್ನಿಶಾಮಕ ದಳದ ಸಿಬ್ಬಂದಿ, ಕುರುವಳ್ಳಿಯ ಮುಳುಗು ತಜ್ಞ ಪ್ರಮೋದ್ ಪೂಜಾರಿ ನೀರಿನಲ್ಲಿ ಶೋಧಾಚರಣೆ ನಡೆಸಿದ್ದರು. ಆದರೆ, ಮೃತದೇಹ ಸಿಕ್ಕಿರಲಿಲ್ಲ. ಸಂಜೆ ಈಶ್ವರ್ ಮಲ್ಪೆ ನೇತೃತ್ವದಲ್ಲಿ ಶೋಧ ನಡೆಸಿದಾಗ ಮೃತದೇಹ ಪತ್ತೆಯಾಗಿದೆ. ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *