ತುಮಕೂರಿನ ಸಿದ್ದಗಂಗಾ ಮಠದ ಹೆಸರಿನಲ್ಲಿ ಕಿಡಿಗೇಡಿಗಳು ಸಾರ್ವಜನಿಕರಿಗೆ ವಂಚನೆ ಎಸಗಿದ ಘಟನೆ ನಡೆದಿದೆ. ಬಂಜೆತನಕ್ಕೆ ನಕಲಿ ಔಷಧಿ ಕೊಟ್ಟು ಜನರಿಂದ ಹಣ ವಸೂಲಿ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.ಸಿದ್ದಗಂಗಾ ಮಠದ ಹೆಸರು ದುರುಪಯೋಗಪಡಿಸಿಕೊಂಡು ಕಿಡಿಗೇಡಿಗಳು ದೇಣಿಗೆ ಸಂಗ್ರಹಿಸುತ್ತಿದ್ದಾರೆ ಎನ್ನುವ ಆರೋಪ ನಗರದಲ್ಲಿ ಕೇಳಿ ಬಂದಿದೆ. ಮಠದ ಹೆಸರಿನಲ್ಲಿ ಬಂಜೆತನಕ್ಕೆ ನಕಲಿ ಔಷಧಿ ವಿತರಣೆ ಮಾಡಿ ಜನರಿಂದ ಹಣ ವಸೂಲಿ ಮಾಡಿರುವ ಆರೋಪ ಕೇಳಿಬಂದಿದೆ. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಿದ್ದಗಂಗಾ ಮಠ, ನಾವು ಈ ರೀತಿ ಬಂಜೆತನಕ್ಕೆ ಅಥವಾ ಯಾವುದೇ ವೈದ್ಯಕೀಯ ಚಿಕಿತ್ಸೆಗೆ ಔಷಧಿಗಳನ್ನು ವಿತರಿಸುತ್ತಿಲ್ಲ. ಜನರಿಂದ ದೇಣಿಗೆ ಸಂಗ್ರಹಕ್ಕೂ ಮಠದಿಂದ ಯಾರನ್ನು ಕೂಡಾ ನೇಮಿಸಿಲ್ಲ ಎಂದು ಹೇಳಿದೆ. ಮಠದ ಹೆಸರಿನಲ್ಲಿ ಈ ರೀತಿ ಹಣ ಕೇಳುವವರನ್ನು ನಂಬಬೇಡಿ, ವಂಚನೆಗೆ ಒಳಗಾಗಬೇಡಿ ಎಂದು ಮಠ ಎಚ್ಚರಿಸಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

