ಧಾರವಾಡ : SSLC ಪರೀಕ್ಷೆ ವೇಳೆ ಸಹಾಯ ಮಾಡ್ತೀನಿ ಎಂದು ನಂಬಿಸಿ ವಿದ್ಯಾರ್ಥಿಇಂದ ಟೀಚರ್ ಒಬ್ಬ ಬಂಗಾರದ ಸರ ಪಡೆದಿರೋ ಆರೋಪ ಕೇಳಿಬಂದಿದೆ. ಧಾರವಾಡದ ಕೆ.ಇ. ಬೋರ್ಡ್ ಸಂಸ್ಥೆಯ ವಿದ್ಯಾರಣ್ಯ ಶಾಲೆಯ ಶಿಕ್ಷಕ ರಾಜಶೇಖರ್, ಅದೇ ಶಾಲೆಯಲ್ಲಿ 10ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಯಿಂದ ಸುಮಾರು 80 ಗ್ರಾಂ ಚಿನ್ನದ ಆಭರಣ ಹಾಗೂ ಹಣ ಪಡೆದುಕೊಂಡಿರುವ ಆರೋಪ ಕೇಳಿಬಂದಿದೆ.ವೈಯಕ್ತಿಕ ಕಾರಣಕ್ಕೆ ಸಮಸ್ಯೆಯಲ್ಲಿ ಸಿಲುಕಿದ್ದೇನೆ. ಹಣ ಅಥವಾ ಚಿನ್ನದ ಆಭರಣ ತಂದುಕೊಡು ನಂತರ ವಾಪಸ್ ಕೊಡುತ್ತೇನೆಂದು ನಂಬಿಸಿ ಶಿಕ್ಷಕ ಆಭರಣ ಪಡೆದಿದ್ದಾನೆ. ವಿದ್ಯಾರ್ಥಿಯು ಮನೆಯಲ್ಲಿ ಯಾರೂ ಇಲ್ಲದ ವೇಳೆ 80 ಗ್ರಾಂ ಆಭರಣ ತಂದುಕೊಟ್ಟಿರುವುದು ವಿದ್ಯಾರ್ಥಿಯ ಪೋಷಕರಿಗೆ ಗೊತ್ತಾದ ಬಳಿಕ ಸಂಗತಿ ಬಹಿರಂಗವಾಗಿದೆ. ವಿದ್ಯಾರ್ಥಿ ಪೋಷಕರು ಸದ್ಯ ಉಪನಗರ ಪೊಲೀಸರಿಗೆ ದೂರು ಸಲ್ಲಿಸಿದ್ದು, ಖಾಕಿಪಡೆ ಹೆಚ್ಚಿನ ತನಿಖೆ ಕೈಗೊಂಡಿದೆ. ವಿದ್ಯಾರ್ಥಿ ಹಾಗೂ ಪೋಷಕರ ಆರೋಪವನ್ನು ತಳ್ಳಿಹಾಕಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

