Breaking News

ಶಹಾಪುರ| ಅಪಘಾತದಲ್ಲಿ ವಿದ್ಯಾರ್ಥಿಗಳ ಸಾವು ಪ್ರಕರಣ: ಟ್ರ್ಯಾಕ್ಟರ್ ವಶ

ಶಹಾಪುರ: ತಾಲ್ಲೂಕಿನ ದೋರನಹಳ್ಳಿ ಪಟ್ಟಣದ ಹತ್ತಿರ ನಡೆದ ರಸ್ತೆ ಅಪಘಾತದಲ್ಲಿ ಭಾನುವಾರ ಅಪಘಾತಪಡಿಸಿದ ಟ್ರ್ಯಾಕ್ಟರ್‌ನ್ನು ಶಹಾಪುರ ಠಾಣೆಯ ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ. ರಸ್ತೆ ಅಪಘಾತದಲ್ಲಿ ಇಬ್ಬರು ಬಾಲಕರು ಮೃತಪಟ್ಟಿದ್ದರು ಹಾಗೂ ಒಬ್ಬ ಬಾಲಕ ಗಾಯಗೊಂಡಿದ್ದ. ಅದರಂತೆ ಟ್ರ್ಯಾಕ್ಟರ್ ಹಿಂಬಂದಿಯಲ್ಲಿ ಉದ್ದನೆಯ ಪಲಗ (ರಂಟೆ ಹೊಡೆಯುವಾಗ ಉಪಯೋಗಿಸುವ ವಸ್ತು) ಸಿಕ್ಕಿಕೊಂಡು ಹೋಗುತ್ತಿದ್ದಾಗ ಪಲಗಕ್ಕೆ ಸಿಕ್ಕುಕೊಂಡಿದ್ದರಿಂದ ಕಾಲು ಕತ್ತರಿಸಿಬಹುದು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಬೈಕಿಗೆ ಟ್ರ್ಯಾಕ್ಟರ್ ಗುದ್ದಿ ವಾಹನ ಸಮೇತ ಚಾಲಕ ಓಡಿ ಹೋಗಿದ್ದ. ಇದು ಪೊಲೀಸರಿಗೆ ದೊಡ್ಡ ಸವಾಲು ಆಗಿ ಪರಿಣಮಿಸಿತ್ತು. ಒಂದು ವಾರ ಸಂಪೂರ್ಣವಾಗಿ ವಿಚಾರಣೆ ಹಾಗೂ ಮಾಹಿತಿ ಕಲೆ ಹಾಕಿ ಕೊನೆಗೂ ಟ್ರ್ಯಾಕ್ಟರ್ ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ರಸ್ತೆ ಅಪಘಾತ ಪ್ರಕರಣ ಕುತೂಹಲ ಮೂಡಿಸಿತ್ತು. ಪೊಲೀಸರ್ ಕಾರ್ಯಕ್ಕೆ ಜನತೆ ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ.

Share News

About BigTv News

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *