ಬೆಂಗಳೂರು; ಲಂಚಾವತಾರ ತಾಳಿದ ವೈದ್ಯೆಯ ಅಮಾನತು ಮಾಡಿ ಆದೇಶ ಹೊರಡಿಸಿದೆ. ಸೂಜಿ ಚುಚ್ಚಲು, ಬ್ಯಾಂಡೆಂಜ್ ಹಾಕಲು ಕಾಸು ಪಡೆದ ಡಾಕ್ಟರ್ ಕೋಮಲ ಅವರನ್ನು ಸಸ್ಪೆಂಡ್ ಮಾಡಲಾಗಿದೆ. ಆರೋಗ್ಯ ಇಲಾಖೆ ಆಯುಕ್ತ ಡಿ.ರಂದೀಪ್ ಆದೇಶ ಮಾಡಿದ್ದು, ಸುದ್ದಿ ಪ್ರಸಾರದ ಬೆನ್ನಲ್ಲೇ ಅಮಾನತು ಮಾಡಿ ಆದೇಶ ಮಾಡಿದ್ದಾರೆ. ಜನರ ವಿಶ್ವಾಸಕ್ಕೆ ಪ್ರಾತ್ರರಾಗಿದ್ದಾರೆ. ಶಾಂತಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡಾ.ಕೋಮಲ ಎಂಬ ವೈದ್ಯೆ ಜನರಿಂದ ಹಣ ಸುಲಿಗೆ ಮಾಡುತ್ತಿದ್ದು ವೈದ್ಯಯ ಲಂಚಾವತಾರ ವಿಡಿಯೋ ವೈರಲ್ ಆಗಿತ್ತು.ಸಿಬ್ಬಂದಿ, ನರ್ಸ್ ಗಳ ಮೂಲಕ ರೋಗಿಗಳಿಂದ ಸುಲಿಗೆ ಮಾಡಲಾಗಿತ್ತು. ವರದಿ ಮಾಡಲಾಗಿತ್ತು ವರದಿ ನೋಡಿ ಎಚ್ಚತ್ತುಕೊಂಡ ಅಧಿಕಾರಿಗಳು ಈಗ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





