ಪುತ್ತೂರು: ಬೆಂಗಳೂರಿನಲ್ಲಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಪುತ್ತೂರಿನ ಮಹಿಳೆಯೊಬ್ಬರ ಲಗೇಜ್ ಬ್ಯಾಗ್ ಕಳೆದುಹೋಗಿದ್ದು, ಇದನ್ನು ನಾಲ್ಕು ದಿನಗಳ ಬಳಿಕ ಬೆಂಗಳೂರಿನ ಉಪ್ಪಾರಪೇಟೆ ಪೊಲೀಸರು ಪತ್ತೆ ಮಾಡಿದ್ದಾರೆ. ಪುತ್ತೂರು ನಗರದ ತೆಂಕಿಲ ನೂಜಿ ನಿವಾಸಿ ರಕ್ಷಿತಾ ದುಬಾಯಿಯ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಮಾ.7 ರಂದು ರಾತ್ರಿ 11.30ಕ್ಕೆ ದುಬಾಯಿಯಿಂದ ಬಂದು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿದಿದ್ದರು. ಅಲ್ಲಿಂದ ಖಾಸಗಿ ಬಸ್ ಒಂದರಲ್ಲಿ ಮೆಜೆಸ್ಟಿಕ್ ಬಸ್ ಹತ್ತಿದ್ದರು. ಬಸ್ ಪ್ರಯಾಣದ ವೇಳೆ ಇವರ ಲಗೇಜ್ ಅನ್ನು ಬಸ್ಸಿನ ಲಗೇಜ್ ಬಾಕ್ಸ್ನಲ್ಲಿ ಇರಿಸಿದ್ದರು. ಮೆಜೆಸ್ಟಿಕ್ ಬಂದು ನೋಡುವಾಗ ಲಗೇಜ್ ಇರಲಿಲ್ಲ. ಈ ಬಗ್ಗೆ ಬಸ್ ನವರಲ್ಲಿ ಕೇಳಿದಾಗ ಸರಿಯಾದ ಮಾಹಿತಿ ಸಿಕ್ಕಿರಲಿಲ್ಲ. ಮಾ. 8 ರಂದು ಈ ಬಗ್ಗೆ ಉಪ್ಪಾರಪೇಟೆ ಪೊಲೀಸರಿಗೆ ದೂರು ನೀಡಲಾಗಿತ್ತು. ಲಗೇಜ್ ಕಳೆದುಹೋಗಿದ್ದ ಬಗ್ಗೆ ಶಾಸಕ ಅಶೋಕ್ ರೈ ಕೂಡ ಬೆಂಗಳೂರು ಪೊಲೀಸ್ ಕಮಿಷನರ್ಗೆ ಮಾಹಿತಿ ನೀಡಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

