ಬೈಪಾಸ್ ಮಧ್ಯೆ ನಿತ್ರಾಣಗೊಂಡ ವೃದ್ಧನಿಗೆ 112 ಖಾಕಿಯ ನೆರವು!
ಸಾವಿರ ವಾಹನಗಳ ನಡುವೆ ಜೀವ ಉಳಿಸಿದ ಹಳೆ ಹುಬ್ಬಳ್ಳಿ ಪೊಲೀಸರು!
ಹುಬ್ಬಳ್ಳಿ: ಕಾರವಾರ ಬೈಪಾಸ್ನಲ್ಲಿ ಇಂದು ಮಾನವೀಯತೆ ಮೆರೆಯಿಸಿದ ಘಟನೆ ನಡೆದಿದೆ. ಹೆದ್ದಾರಿ ಮಧ್ಯೆ ನಿತ್ರಾಣಗೊಂಡು ಬಿದ್ದಿದ್ದ ವೃದ್ಧನು ಸಾವಿರಾರು ವಾಹನಗಳ ನಡುವೆ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದ..
ಈ ವೇಳೆ ತಕ್ಷಣ ಸ್ಪಂದಿಸಿದ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯ ಪೊಲೀಸರು ಹಾಗೂ ಹೋಯ್ಸಳ 112 ತಂಡ ಸ್ಥಳಕ್ಕೆ ಧಾವಿಸಿ, ವೃದ್ಧನಿಗೆ ಆರೈಕೆ ನೀಡಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ದು ಜೀವ ಉಳಿಸಿದರು.ಭಾರೀ ಟ್ರಾಫಿಕ್ ನಡುವೆ ಸಮಯಕ್ಕೆ ಸರಿಯಾಗಿ ನೆರವಾದ ಪೊಲೀಸರ ಕಾರ್ಯ ಖಾಕಿಯ ಮಾನವೀಯತೆ ಮತ್ತು ಕರ್ತವ್ಯನಿಷ್ಠೆಗೆ ಉತ್ತಮ ಉದಾಹರಣೆಯಾಗಿದೆ. ಹೆದ್ದಾರಿಯಲ್ಲಿ ಅಸಹಾಯನಾಗಿದ್ದ ವೃದ್ಧನಿಗೆ ದೇವರಂತೆ ಬಂದ ಪೊಲೀಸರು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ!
bigtvnews | Hubli Dharwad News | Kannada News | Karnataka News Hubli News | News In Hubli | Local news
