ಬೀದರ್ ತಾಲ್ಲೂಕಿನ ಬೆನಕನಳ್ಳಿಯಲ್ಲಿ ಆಕಸ್ಮಿಕ ಬೆಂಕಿಗೆ ಸೋಮವಾರ ನಾಲ್ಕು ಅಂಗಡಿಗಳು ಆಹುತಿಯಾಗಿವೆ. ಗ್ರಾಮದ ಭವಾನಿ ಮಂದಿರ ಹಿಂಭಾಗದಲ್ಲಿನ ಅಜಯಸಿಂಗ್ ಜಯಸಿಂಗ್ ಚವಾಣ್ ಅವರ ಜನರಲ್ ಸ್ಟೋರ್, ಕಿರಾಣಿ ಅಂಗಡಿ, ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಐಸ್ಕ್ರೀಂ ಆಯಂಡ್ ಜ್ಯೂಸ್ ಸೆಂಟರ್ನಲ್ಲಿದ್ದ ಸಾಮಗ್ರಿಗಳು ಸುಟ್ಟು ಹೋಗಿವೆ. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ನಿಯಂತ್ರಣಕ್ಕೆ ತಂದರು. ತಹಶೀಲ್ದಾರ್ ರವೀಂದ್ರ ದಾಮಾ ಹಾಗೂ ಇತರ ಅಧಿಕಾರಿಗಳು ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಬೆಂಕಿ ಅವಘಡದಿಂದ ತಮಗೆ ₹30 ಲಕ್ಷದಿಂದ ₹35 ಲಕ್ಷ ನಷ್ಟವಾಗಿದೆ ಎಂದು ಅಜಯಸಿಂಗ್ ಚವಾಣ್ ತಿಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

