ಬೆಂಗಳೂರು: ತಮಿಳುನಾಡಿನ ಕೃಷ್ಣಗಿರಿಯಿಂದ ಬೆಂಗಳೂರಿಗೆ ಜಿಂಕೆ ಕೊಂಬು ತಂದು ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಸಿಸಿಬಿ ಮತ್ತು ಚಿಕ್ಕ ಬಾಣಾವಾರ ಪೊಲೀಸರ ಜಂಟಿ ಕಾರ್ಯಾ ಚರಣೆಯಲ್ಲಿ ಬಂಧಿ ಸಲಾಗಿದೆ. ಮುರುಳಿ (29), ಮಂಜುನಾಥ (39) ಹಾಗೂ ಕಾರ್ಯಪ್ಪ (53) ಬಂಧಿತರು. ಆರೋಪಿಗಳಿಂದ ಸುಮಾರು 10 ಲಕ್ಷ ರೂ.ಮೌಲ್ಯದ ಜಿಂಕೆಯ 2 ಕೊಂಬನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಚಿಕ್ಕಬಾಣಾವರ ಕಾಲೇಜುವೊಂದರ ಬಳಿ ಮಾರಾಟ ಮಾಡಲು ಮುಂದಾಗಿದ್ದರು. ಈ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸ್ ಇನ್ ಸ್ಪೆಕ್ಟರ್ ಪಿ. ಸುರೇಶ ಮತ್ತು ಚಿಕ್ಕಬಾಣಾವಾರ ಪೊಲೀರ್ಪಿಐ ನೇತೃತ್ವದ ತಂಡ ದಾಳಿ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಕಾಡು ಪ್ರಾಣಿಗಳನ್ನು ಹತ್ಯೆಗೈದು ಈ ಕೃತ್ಯ ಮಾಡುತ್ತಿದ್ದಾರೆಯೋ ಅಥವಾ ಮೃತ ಪ್ರಾಣಿಗಳ ಕೊಂಬನ್ನು ಮಾರಾಟಕ್ಕೆ ಯತ್ನ ನಡೆಸುತ್ತಿದ್ದರೋ ಎಂಬ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸರು, ಈ ಕೃತ್ಯದ ಹಿಂದಿರುವವರ ಬಗ್ಗೆ ಪತ್ತೆ ಮುಂದಾಗಿದ್ದಾರೆ. ಕೆಲ ಪ್ರಾಣಿಗಳ ಕೊಂಬು ಹಾಗೂ ಚರ್ಮ ಹೆಚ್ಚಿನ ಬೆಲೆಗೆ ಮಾರಾಟ ಹಾಗೂ ವಿದೇಶಗಳಿಗೂ ಸಾಗಣೆ ಮಾಡುತ್ತಿರುವ ಬಗ್ಗ ಶಂಕೆ ಇದೆ ಎಂದು ಪೊಲೀಸರು ತಿಳಿದ್ದಾರೆ. ಈ ಸಂಬಂಧ ಚಿಕ್ಕಬಾಣಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

