ಬೆಳಗಾವಿಯಲ್ಲಿ ಅಪಾರ ಮೌಲ್ಯದ ಜಮೀನಿನ ನಕಲಿ ದಾಖಲೆ ಸೃಷ್ಟಿಸಿ ಅಕ್ರಮವಾಗಿ ಮಾರಾಟ ಮಾಡಿದ ಆರೋಪದ ಮೇಲೆ 80 ವರ್ಷದ ಮಂದಾಕಿನಿ ಪರಿಶವಾಡಕರ ಎಂಬ ವೃದ್ಧೆಯನ್ನು ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಣಬರ್ಗಿ ರಸ್ತೆಯ ಮಹಾಂತೇಶ ನಗರದಲ್ಲಿನ ಜಾಗದ ಮಾಲೀಕರಾದ ರತ್ನಾ ಯಶವಂತ ಮಲ್ಲೂಕರ ಅವರಂತೆ ನಟಿಸಿದ ಮಂದಾಕಿನಿ, ನಕಲಿ ದಾಖಲೆ ಸೃಷ್ಟಿಸಿ 2023ರಲ್ಲಿ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಜಮೀನನ್ನು ಬೇರೊಬ್ಬರ ಹೆಸರಿಗೆ ಸೇಲ್ಡೀಡ್ ಮಾಡಿಸಿದ್ದರು. ವಂಚನೆ ತಿಳಿದು ರತ್ನಾ ಅವರು ದೂರು ನೀಡಿದ ಬಳಿಕ ತನಿಖೆ ನಡೆಸಿದ ಪೊಲೀಸರು ಮಂದಾಕಿನಿಯನ್ನು ಬಂಧಿಸಿದ್ದಾರೆ. ಕೃತ್ಯಕ್ಕೆ ಸಹಕರಿಸಿದ ಆರೋಪದ ಮೇಲೆ ರಾಹುಲ್ ಅನೀಲ ಮಗದುಮ್ ವಿರುದ್ಧವೂ ಪ್ರಕರಣ ದಾಖಲಾಗಿದ್ದು, ಆತನಿಗಾಗಿ ಶೋಧ ನಡೆಸಲಾಗುತ್ತಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

